ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಮದ್ದೇರಿ ದೈವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಮನವಿ ಪತ್ರ ಬಿಡುಗಡೆ ಸಮಾರಂಭ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ ತುಳುನಾಡು ದೇವ-ದೈವ ವಸ್ಥಾನಗಳ ನಾಡಾಗಿದ್ದು ಜೀರ್ಣೋದ್ದಾರದ ಮೂಲಕ ಸುಖ, ಶಾಂತಿ ನೆಮ್ಮದಿ ಹಾಗೂ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸುಬ್ರಹ್ಮಣ್ಯರಾವ್ ನಂದಗೋಕುಲ ಪಡುಬಿದ್ರೆ, ವೆಂಕಟೇಶ ಭಟ್ ಚೆನ್ನೈ, ಉಮೇಶ್ ಶೆಟ್ಟಿ ತೋಕೂರುಗುತ್ತು,ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ದಿಲೀಪ್ ರೋಡ್ಕರ್, ಟಿ ರಾಮಕೃಷ್ಣ ಶೆಟ್ಟಿ ತೋಕೂರುಗುತ್ತು, ಪುರುಷೋತ್ತಮ ಶೆಟ್ಟಿ ಬೈಲಗುತ್ತು ಪಂಜ, ಟಿ.ಎಸ್ ಪ್ರಭಾಕರರಾವ್ ಕಂಬಳಬೆಟ್ಟು,ರಾಜೇಶ್ ಸಾಲ್ಯಾನ್, ದೊಡ್ಡಮನೆ,ತೋಕೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಆಚಾರ್ಯ , ಗೌರವಾಧ್ಯಕ್ಷ ಹರಿದಾಸ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಹೇಮನಾಥ ಅಮೀನ್ ನಿರೂಪಿಸಿದರು.ಬಳಿಕ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು ಸಂಪತ್ ದೇವಾಡಿಗ ಧನ್ಯವಾದ ಅರ್ಪಿಸಿದರು.



