ದಕ್ಷಿಣ ಕನ್ನಡ : ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂಡಬಿದ್ರೆ ತಾಲೂಕು ಜಾನಪದ ಪರಿಷತ್ ಘಟಕದ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಲಾಯಿತು.

ಮೂಡುಬಿದ್ರೆ ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷರಾಗಿ ಸಮಾಜ ಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಉಪಾಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ ಐಕಳ ಹಾಗೂ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿಯಾಗಿ ಸಂಗೀತ ಗಣೇಶ್ ಪೈ, ಹಾಗೂ ಭವ್ಯಶ್ರೀ ವಿನಯ್, ಕೋಶಾಧಿಕಾರಿಯಾಗಿ ಡಾ.ನಾಗರಾಜ ಶೆಟ್ಟಿ ಅಂಬೂರಿ, ಸಂಚಾಲಕರಾಗಿ ಚೇತನ ಹೆಗಡೆ ಹಾಗೂ ಸದಸ್ಯರಾಗಿ ಸದಾನಂದ ನಾರಾವಿ, ಸೋಮಶೇಖರ ಮಯ್ಯ, ಸೀತಾರಾಮ ಕಟೀಲು ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಜಾನಪದ ಕೇಂದ್ರ ಸಮಿತಿ ಸದಸ್ಯರಾದ ಡಾಕ್ಟರ್ ರಾಜೇಶ್ ಆಳ್ವ ಬದಿಯಡ್ಕ, ಡಾಕ್ಟರ್ ರಾಜೇಶ್ ಭಟ್ ಮಂದಾರ, ತಾರಾನಾಥ ಶೆಟ್ಟಿ ಬೋಳಾರ, ರಾಜೇಶ್ ಸ್ಕೈಲಾರ್ಕ್ ಉಪಸ್ಥಿತರಿದ್ದರು.



