ದಕ್ಷಿಣ ಕನ್ನಡ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿ ಕಾಸರಗೋಡು ಜಿಲ್ಲೆ ಇಲ್ಲಿ ವೇದಮಾತ ಟ್ರಸ್ಟ್ ಆಶ್ರಯದಲ್ಲಿ ದಿನಾಂಕ 26.03.2024 ರಂದು ಉಗ್ರಾಣಮಹೂರ್ತ, ರಾತ್ರಿ 8 ಗಂಟೆಯಿಂದ ಯಕ್ಷಗಾನ ಬಯಲಾಟ
ದಿನಾಂಕ 27.03.2024 ರಿಂದ 03. 04.2024ರ ವರೆಗೆ ಲೋಕಕಲ್ಯಾಣಾರ್ಥವಾಗಿ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾಯಾಗ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನಾಂಕ 27ರಂದು ಸಾಮೂಹಿಕ ಪ್ರಾರ್ಥನೆ ಮತ್ತು ಗಣಪತಿ ಹವನ ದೊಂದಿಗೆ ಋಕ್ ಸಂಹಿತಾ ಯಾಗದ ಆರಂಭ, ಮಹಾ ನವಗ್ರಹ ಶಾಂತಿ ರಾತ್ರಿ 8 ರಿಂದ ಶಾಸ್ತ್ರೀಯ ಸಂಗೀತ 9:30ರಿಂದ ಭಕ್ತಿ ಗಾನ ಮೇಳ ದಿನಾಂಕ 28ರಂದು ಐಕ ಮತ್ಯ ಹೋಮ, ಮಹಾ ನವಗ್ರಹ ಶಾಂತಿ, 8 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ 8:45 ರಿಂದ ಕುಣಿತ ಭಜನೆ 9:15 ರಿಂದ ಭರತನಾಟ್ಯ ದಿನಾಂಕ 29 ರಂದು ರುದ್ರ ಹೋಮ ಸಹಿತ ಇತರ ಧಾರ್ಮಿಕ ವಿಧಿಗಳು ರಾತ್ರಿ 8 ರಿಂದ ನೃತ್ಯಾರ್ಪಣಂ ದಿನಾಂಕ 30 ರಂದು ಧನ್ವಂತರಿ ಹೋಮ, ದುರ್ಗಾ ಸಪ್ತಶತಿ ಪಾರಾಯಣ ರಾತ್ರಿ ಎಂಟರಿಂದ ಹರಿಕಥೆ 8:30 ರಿಂದ ದಾಸ ಸಿಂಚನ 9:30ರಿಂದ ಭರತನಾಟ್ಯ ದಿನಾಂಕ 31ರಂದು ದುರ್ಗಾ ಸಪ್ತಶತಿ ಪಾರಾಯಣ ರಾತ್ರಿ 8ರಿಂದ ಗುರುವಂದನೆ ನಂತರ ಶಾಸ್ತ್ರೀಯ ಸಂಗೀತ ದಿನಾಂಕ 1 ರಂದು ದುರ್ಗಾಸಪ್ತಶತಿ ಪಾರಾಯಣ ಕಲಶ ಪೀಠದಲ್ಲಿ ಮಹಾಪೂಜೆ ರಾತ್ರಿ 8 ರಿಂದ ಸಂಗೀತ ಕಚೇರಿ ದಿನಾಂಕ 2 ರಂದು ಸಪ್ತಶತಿ ಪಾರಾಯಣ ಕಲಶ ಪೀಠದಲ್ಲಿ ಮಹಾಪೂಜೆ ರಾತ್ರಿ 7 ರಿಂದ ಪಂಚ ವೀಣವಾದನ ರಾತ್ರಿ 8 ರಿಂದ ಶಾಸ್ತ್ರೀಯ ಸಂಗೀತ 8 45 ರಿಂದ ಭಕ್ತಿ ಸಂಗೀತ 9:15 ರಿಂದ ಭರತನಾಟ್ಯ 9:35 ರಿಂದ ನೃತ್ಯ ವೈವಿಧ್ಯ ದಿನಾಂಕ 3 ರಂದು ಸಹಸ್ರ ಚಂಡಿಕಾಯಾಗ ಆರಂಭ ಬೆಳಗ್ಗೆ 10 ಗಂಟೆಗೆ ಋಕ್ ಸಂಹಿತಾ ಯಾಗದ ಪೂರ್ಣಾಹುತಿ 11 ಗಂಟೆಗೆ ಸಹಸ್ರ ಚಂಡಿಕಾಯಾಗದ ಪೂರ್ಣಾಹುತಿ ನಂತರ ಮಹಾಪೂಜೆ, ಪ್ರಸಾದ ಸಂತರ್ಪಣೆ ನಂತರ ಮಹಾಮಂತ್ರಕ್ಷತೆ ರಾತ್ರಿ ಎಂಟರಿಂದ ದ್ವಂದ್ವ ವಯಲಿನ್ ವಾದನ ಕಾರ್ಯಕ್ರಮವಿದ್ದು ಕಾರ್ಯಕ್ರಮದ ಪ್ರತಿದಿನವೂ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಸಂತರ್ಪಣೆ , ರಾತ್ರಿ ಪ್ರಸಾದ ಭೋಜನ ನಡೆಯಲಿದೆ, ಸಾರ್ವಜನಿಕರು ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಹಕಾರ ನೀಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ದೇವರ ಕೃಪೆಗೆ ಪಾತ್ರರಾಗುವಂತೆ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ, ವೇದಮಾತಾ ಟ್ರಸ್ಟ್, ಹಾಗೂ ಯಾಗ ಸಮಿತಿ ಆಮಂತ್ರಣ ಪತ್ರದಲ್ಲಿ ವಿನಂತಿಸಿದ್ದಾರೆ. .



