ಮುಲ್ಕಿ: ಆದಿ ಕಿಲ್ಲಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಶ್ರೀ ಕೋರ್ದಬ್ಬು ಮತ್ತು ತನ್ನಿ ಮಾನಿಗ ದೈವಗಳ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಎ. 2 ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಚಪ್ಪರ ಮುಹೂರ್ತ, ಮಧ್ಯಾಹ್ನ ದೊಂಪ ಏರುವುದು, ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ 7 ಗಂಟೆಗೆ ಭಂಡಾರ ಇಳಿಯುವ ಕಾರ್ಯಕ್ರಮನಡೆದು ಶ್ರೀ ಕೋರ್ದಬ್ಬು ಮತ್ತು ತನ್ನಿ ಮಾನಿಗ ದೈವಗಳ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭ ನಾರಾಯಣ ಭಟ್ ಕಿಲ್ಪಾಡಿ,ವಸಂತ ಗುರಿಕಾರ ಮಧ್ಯಸ್ಥ ಗೋಪಿನಾಥ ಪಡoಗ,ರಾಜೇಶ್ ಕಿಲ್ಪಾಡಿ,ರಂಜನ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ,ಮಾಧವ ಆಚಾರ್ಯ, ಪೃಥ್ವಿರಾಜ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಶಂಕರ್ ಪಡoಗ,ದಯಾನಂದ ಕಿಲ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು ಎ.3 ಸಂಜೆ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಲಿದೆ.



