ಜನ ಮನದ ನಾಡಿ ಮಿಡಿತ

Advertisement

ಹಣ,ದಾಖಲೆ ಪತ್ರ ಮರಳಿಸಿದ ಆಟೋ ಚಾಲಕ*ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ

ಬಂಟ್ವಾಳ: ಆಟೋ ಚಾಲಕರೋರ್ವರು ದಾರಿಯಲ್ಲಿ ಸಿಕ್ಕ ಹಣದ ಕಟ್ಟನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದು, ಪ್ರಶಂಸೆಗೆ ಒಳಗಾಗಿದ್ದಾರೆ.

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಬಸ್ತಿಕೋಡಿಯ ಆಟೋ ಮಾಲಕ ಸೀತಾರಾಮ ಶೆಟ್ಟಿ ಹರ್ಕಾಡಿ ಅವರು ಮಡಂತ್ಯಾರ್ ನಿಂದ ಆಟೊವನ್ನು ಬಾಡಿಗೆಗೆ ಬರುವಾಗ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರೊಂದು ಸಿಕ್ಕಿದ್ದು ಅದರಲ್ಲಿ ಹದಿಮೂರುವರೆ ಸಾವಿರ ನಗದು ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಚೆಕ್ ಹಾಗೂ ಕೆಲವು ಡಾಕ್ಯುಮೆಂಟಗಳು ದೊರೆತಿದ್ದವು.ಅದನ್ನು ಬಸ್ತಿಕೋಡಿಗೆ ತಂದು ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ಅವರ ಮೂಲಕ ಅದರ ವಾರಸುದಾರರನ್ನು ಸಂಪರ್ಕಿಸಿ ಅವರನ್ನು ಬಸ್ತಿಕೋಡಿಗೆ ಕರೆಸಿ ಅವರಿಗೆ ಹಸ್ತಾಂತರಿಸಲಾಯಿತು. ಆಟೋ ಚಾಲಕ,ಮಾಲಕ ಸೀತಾರಾಮ ಶೆಟ್ಟಿ ಅವರ ಈ ಪ್ರಾಮಾಣಿಕತೆಗೆ ಬಸ್ತಿಕೋಡಿ ನಾಗರಿಕರು ಅವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!