ಜನ ಮನದ ನಾಡಿ ಮಿಡಿತ

Advertisement

ಪಡುಮಾರ್ನಾಡು ಪಂಚಾಯತ್ ಮಾಸಿಕ ಸಭೆ ಅರ್ಧದಲ್ಲಿ ಮುಂದೂಡಿಕೆ

ಪಡುಮಾರ್ನಾಡು ಪಂಚಾಯತ್ ಮಾಸಿಕ ಸಭೆ ಅರ್ಧದಲ್ಲಿ ಮುಂದೂಡಿಕೆ, ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಸಿಕ ಸಭೆಯು ಶುಕ್ರವಾರ 11.00 ಗಂಟೆಗೆ ಪ್ರಾರಂಭವಾಯಿತು.

 

ಇದೇ ಸಮಯದಲ್ಲಿ 20 ಮಂದಿ ಬನ್ನಡ್ಕ ನಿವಾಸಿಗಳು ತಮ್ಮ ಮನೆಯ ಸಮೀಪ ನಿರ್ಮಾಣಗೊಳ್ಳುತ್ತಿರುವ ಅನಧಿಕೃತ ಕೈಗಾರಿಕೆ ಕಟ್ಟಡ ಕಾಮಗಾರಿ ಹಾಗೂ ಬೃಹತ್ ಆಕಾರದ ಬಾಯ್ಲರ್ ತಯಾರಿಕ ಘಟಕ ಪ್ರಾರಂಭಗೊಂಡಿದೆ ಇದರಿಂದ ಸ್ಥಳೀಯ ಎಲ್ಲಾ ನಿವಾಸಿಗಳಿಗೆ ಶಬ್ದ ಮಾಲಿನ್ಯ ಹಾಗೂ ಕೃಷಿ ಆಸ್ತಿಗಳಿಗೆ ಪರಿಸರ ಮಾಲಿನ್ಯ ಆಗುತ್ತಿದೆ , ರಸ್ತೆ ಬ್ಲಾಕ್ ಆಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಪಂಚಾಯತಿಗೆ ದೂರನ್ನು ಸಲ್ಲಿಸಲು ಬಂದಿದ್ದರು. ಈ ಕೈಗಾರಿಕೆಗೆ ಗ್ರಾಮ ಪಂಚಾಯತಿಯಿಂದ ಇದುವರೆಗೆ ಯಾವುದೇ ಪರವಾನಿಗೆ ನೀಡಿರುವುದಿಲ್ಲ ಆದರೂ ಅಧ್ಯಕ್ಷರ ಕುಮ್ಮಕ್ಕಿನ ಮೇರೆಗೆ ಈ ಕೈಗಾರಿಕೆ ರಾಜಾರೋಷವಾಗಿ ಉತ್ಪಾದನೆ ಹಾಗೂ ಬೃಹತ್ ಕಟ್ಟಡಗಳನ್ನು ಕಟ್ಟಿರುತ್ತಾರೆ.

ಕಟ್ಟಡ ಕಟ್ಟಲು ಕೂಡ ಯಾವುದೇ ಪರವಾನಿಯನ್ನು ಗ್ರಾಮ ಪಂಚಾಯತಿಯಿಂದ ಪಡೆದಿರುವುದಿಲ್ಲ ಈಗಾಗಲೇ ಈ ಜಾಗದ ಇಂಡಸ್ಟ್ರಿಯಲ್ ಕನ್ವೆರ್ಷನ್ ಮಾಡಿದನ್ನು ಮಾನ್ಯ ಸಹಾಯಕ ಆಯುಕ್ತರು ಮಂಗಳೂರು ಇವರು ತಡೆಯಾಜ್ಞ ನೀಡುತ್ತಾರೆ.

ಈ ಬಗ್ಗೆ ಸಮಸ್ಯೆ ಹೇಳಲು ಬಂದ ಗ್ರಾಮಸ್ಥರಿಗೆ ಪಂಚಾಯತ್ ಅಧ್ಯಕ್ಷರು ಯಾವುದೇ ಕಾರಣಕ್ಕೂ ಈ ಕಟ್ಟಡವನ್ನು ಅಥವಾ ತಯಾರಿಕ ಘಟಕಕ್ಕೆ ಬಂದು ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು .
ಆದರೆ ಹಲವಾರು ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಘಟಕವು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಪರವಾನಿಗೆ ಪಡೆಯದೆ ಇಷ್ಟು ದೊಡ್ಡ ಉದ್ದಿಮೆಯನ್ನು ಸ್ಥಾಪಿಸುವುದು ಕಾನೂನುಬಾಹಿರವಾಗುತ್ತದೆ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ನಿರ್ಣಯ ಕೈಗೊಂಡರೆ ಆ ಉದ್ದಿಮೆಯನ್ನು ನಾವು ಬಂದ್ ಮಾಡಬಹುದು ಎಂದು ಹೇಳಿದರು. ಆದರೆ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಯಾವುದೇ ಕಾರಣಕ್ಕೂ ಬಂದ್ ಮಾಡಲು ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಹೇಳಿದಾಗ ಗ್ರಾಮಸ್ಥರು ರೊಚ್ಚಿಗೆದ್ದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಹಾಗೂ ಇದರ ಬಗ್ಗೆ ವ್ಯವಸ್ಥಿತ ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಈ ಗ್ರಾಮ ಪಂಚಾಯತಿನ ದುರಹಸ್ಥೆ ಏನಂದರೆ ಇಷ್ಟು ದೊಡ್ಡ ಅನಧಿಕೃತ ಕಟ್ಟಡ ಹಾಗೂ ಉತ್ಪಾದನೆ ನಡೆಯುತ್ತಿರುವ ಉದ್ಯಮಗೆ ಯಾವುದೇ ಪರವಾನಿಗೆ ನೀಡದೆ ಉತ್ಪಾದನೆ ಘಟಕ ನಡೆಸುವುದು ಎಂದರೆ ಇದರ ಹಿಂದೆ ಯಾವ ಕಾಂಚಾಣದ ಸದ್ದು ಇದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಸದಸ್ಯರಾದ ಮೊಹಮದ್ ಅಸ್ಲಾಂ ಸತೀಶ್ ಕರ್ಕೇರ, ಅಭಿನಂದನ್ ಬಲ್ಲಾಳ್ ಹಾಗೂ ರಮೇಶ್ ಯಸ್ ಶೆಟ್ಟಿ ಈ ಉದ್ದಿಮೆಯನ್ನು ಕೂಡಲೇ ಬಂದ್ ಮಾಡಲು ನಿರ್ಣಯ ಕೈಗೊಳ್ಳಬೇಕು ಎಂದರು.*ಇದಕ್ಕೆ ಒಪ್ಪದ ಅಧ್ಯಕ್ಷ ವಾಸುದೇವ ಭಟ್ ಯಾವುದೇ ಕಾರಣಕ್ಕೂ ಉದ್ದಿಮೆಯನ್ನು ನಿಲ್ಲಿಸಲಾಗುವುದಿಲ ತೊಂದರೆ ಇದ್ದರೆ ಅದನ್ನು ಪರಿಹರಿಸೋಣ ಎಂದರು *

ಈ ರೀತಿಯ ಬೇಜವಾಬ್ದಾರಿ ಹೇಳಿಕೆಯ ಹಿಂದೆ ಅಧ್ಯಕ್ಷರಿಗೆ ಕಪ್ಪ ಕಾಣಿಕೆ ಸಂದಯ ಆಗಿರಬಹುದು ಎಂದು ಜನರು ಗುಸು ಗಸು ಮಾತನಾಡುತ್ತಿದ್ದಾರೆ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!