ಕೇರಳ, ವಯನಾಡ್ನಲ್ಲಿ ಭೀಕರ ಭೂಕುಸಿತದಲ್ಲಿ ನೆಲೆ ಕಳೆದುಕೊಂಡವರಿಗೆ ಎನ್ಎಸ್ಎಸ್ ಸ್ವಯಂ ಸೇವಕರು ನೆರವಾಗಿದ್ದಾರೆ.

ಭೂಕುಸಿತದಿಂದ ನೆಲೆ ಕಳೆದುಕೊಂಡವರ ಪೈಕಿ ೧೫೦ ಜನರಿಗೆ ಎನ್ಎಸ್ಎಸ್ ಸ್ವಯಂ ಸೇವಕರು ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ. ಈ ಕುರಿತಾಗಿ ಕೇರಳ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ರರವರು ತ್ರಿಶೂರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಎನ್ಎಸ್ಎಸ್ ಸ್ವಯಂ ಸೇವಕರು ಮನೆ ಇಲ್ಲದ ಸಹಪಾಠಿಗಳಿಗೆ ‘ಪ್ರೀತಿಯ ಮನೆ’ ಎನ್ನುವ ಹೆಸರಿನಡಿ ಹಲವು ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಇದೀಗ ಇದೇ ಮಾದರಿಯಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಎನ್ಎಸ್ಎಸ್ ಸ್ವಯಂ ಸೇವಕರು ಮನೆ ನಿರ್ಮಾಣ ಮಾಡಿಕೊಡಳಿದ್ದಾರೆ. ಕೇರಳ ವಿಶ್ವವಿದ್ಯಾಲಯ, ಹೈಯರ್ ಸೆಕೆಂಡರಿ ಸ್ಕೂಲ್, ಐಟಿಐ ಸೇರಿದಂತೆ ಕೇರಳದ ವಿವಿಧ ಶಾಲಾ ಕಾಲೇಜುಗಳ ಎನ್ಎಸ್ಎಸ್ ತಂಡ ಸೇರಿ ಮನೆ ನಿರ್ಮಿಸಲಿದೆ. ಅಲ್ಲದೇ ದುರಂತದಿAದ ಮಾನಸಿಕವಾಗಿ ಕುಗ್ಗಿರುವವವರಿಗೆ ಕೌನ್ಸಿಲಿಂಗ್ ಮಾಡಲು ತಂಡ ಮುಂದಾಗಿದ್ದು, ಎಂದಿನAತೆ ಶಾಲಾ ಕಾಲೇಜುಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಅಭಿಯಾನವನ್ನು ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



