ಸಣ್ಣ ಸಣ್ಣ ಗೂಡಂಗಡಿಗಳಿಗೆ ನುಗ್ಗಿದ ಕಳ್ಳರು ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬುಡೋಳಿ ಮತ್ತು ಗಡಿಯಾರ ಎಂಬಲ್ಲಿ ನಡೆದಿದೆ.

ಬುಡೋಳಿ ಕೇಶವ ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಚಿಲ್ಲರೆ ಸಾಮಾಗ್ರಿಗಳಾದ ಸಿಗರೇಟ್ ಕಳವು ಮಾಡಿದ್ದು ಇವರು ಪೋಲೀಸ್ ದೂರು ನೀಡಿಲ್ಲ ಎಂದು ಹೇಳಲಾಗಿದೆ. ಗಡಿಯಾರ ಹರೀಶ್ ಪೂಜಾರಿ ಮತ್ತು ಲೋಕೇಶ್ ಕುಲಾಲ್ ಎಂಬವರ ಗೂಡಂಗಡಿಗೆ ನುಗ್ಗಿ ಒಂದು ಅಂಗಡಿಯಿಂದ ಅಡುಗೆ ಗ್ಯಾಸ್ ನ ಸಿಲಿಂಡರ್ ಕಳವು ಮಾಡಲಾಗಿದೆ ಎನ್ನಲಾಗಿದೆ.
ಅದರಲ್ಲಿ ಒಂದುಗೂಡಂಗಡಿ ಕಳೆದ ಒಂದು ತಿಂಗಳಿನಿಂದ ಬಂದ್ ಆಗಿತ್ತು.ಅದರೊಳಗಿದ್ದ ಸಾಮಾಗ್ರಿಗಳನ್ನು ಕಳವುಮಾಡಲಾಗಿದೆ ಎಂದು ಹೇಳಲಾಗಿದ್ದು,ಇಲ್ಲಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗದ ಕಳ್ಳರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.
ಮಳೆಗಾಲದಲ್ಲಿ ಈ ಬಾಗದಲ್ಲಿ ಬೀಟ್ ಪೋಲೀಸರ ಸಂಚಾರ ಕಡಿಮೆಯಾಗಿದ್ದು, ಕಳ್ಳರ ದಾರಿ ಸುಗಮವಾಗಿ ಸಾಗಲು ಸಾಧ್ಯವಾಗಿದೆ ಎಂಬ ಆರೋಪ ಸ್ಥಳೀಯರದ್ದು.ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳು ಇದಾಗಿದ್ದು, ವ್ಯಾಪ್ತಿಯ ಕಡೆ ಭಾಗವಾಗಿದೆ. ಪೋಲೀಸರಿಗೆ ಕಳ್ಳರ ಕಾಟವನ್ನು ಎದುರಿಸುವುದು ಸವಾಲಾಗಿದ್ದು, ಮಳೆಗಾಲದಲ್ಲಿ ಪ್ರತಿ ವರ್ಷ ಕಳ್ಳರ ಕೂಟ ಬಲಗೊಳ್ಳುತ್ತಿದ್ದು, ಸಾರ್ವಜನಿಲ ವಲಯಕ್ಕೆ ಒಂದು ರೀತಿಯ ಆತಂಕದ ಜೀವನವಾಗಿದೆ.



