ಜನ ಮನದ ನಾಡಿ ಮಿಡಿತ

Advertisement

ಎಳತ್ತೂರು ಜತ್ತಬೆಟ್ಟು ವನಜಾಕ್ಷಿ ಶೆಟ್ಟಿ ವಿಧಿವಶ..!

ಎಳತ್ತೂರು ಜತ್ತಬೆಟ್ಟು ಶ್ರೀಮತಿ ವನಜಾಕ್ಷಿ ಶೆಟ್ಟಿಯವರು ನವೆಂಬರ್ 25 ರಂದು ವಯೋಸಹಜವಾಗಿ ವಿಧಿವಶರಾಗಿದ್ದಾರೆ.

ಎಳತ್ತೂರು ಮತ್ತು ಸುತ್ತಮುತ್ತ ಬೇಬಿ ಶೆಟ್ಟಿ ಎಂದೇ ಚಿರ ಪರಿಚಿತರಾಗಿದ್ದ ವನಜಾಕ್ಷಿ ಶೆಟ್ಟಿಯವರು ಜನಾನುರಾಗಿಯಾಗಿದ್ದು, ಎಲ್ಲರಿಗೂ ಬೇಕಾದವರಾಗಿದ್ದರು. ಅತಿಥಿ ದೇವೋಭವ ಎಂಬ ತತ್ವದಲ್ಲಿ ಅಪಾರ ನಂಬಿಕೆಯುಳ್ಳ ಬೇಬೆ ಶೆಟ್ಟಿಯವರು ತಮ್ಮ ಮನೆಗೆ ಯಾರೇ ಬಂದರೂ ಊಟ ಮಾಡಿಸದೇ ಕಳುಹಿಸಿದವರಲ್ಲ. ಸಣ್ಣ ಮಗುವಾಗಲಿ, ಹಿರಿಯರಾಗಲಿ ಗೌರವ ಕೊಟ್ಟು ಪ್ರೀತಿಯ ಮಾತುಗಳಿಂದ ಮಾತನಾಡಿಸಿ ಕಳುಹಿಸುವ ದೊಡ್ಡ ಗುಣ. ತನ್ನ ಅಪೂರ್ವ ಗುಣಗಳಿಂದ ಅಕ್ಕ ಪಕ್ಕದವರಿಗೆ ಪ್ರೀತಿಯ ಬೇಬಿ ಅಕ್ಕನಾಗಿ, ಊರಿನವರಿಗೆ ಗೌರವದ ವನಜಕ್ಕನಾಗಿ, ಸಂಬಂಧಿಕರಿಗೆ ಅಚ್ಚು ಮೆಚ್ಚಿನ ಸಂಬಂಧಿಯಾಗಿ ಎಲ್ಲರ ಪ್ರೀತಿ ಅಭಿಮಾನ ಮತ್ತು ವಿಶ್ವಾಸವನ್ನು ಸಂಪಾದಿಸಿಕೊಂಡ ಗುಣ ಸಂಪನ್ನೆ ಬೇಬಿ ಶೆಟ್ಟಿಯವರು. ಹೆತ್ತವರಿಗೆ ಮುದ್ದಿನ ಮಗಳಾಗಿ, ಗಂಡನಿಗೆ ಅನುರೂಪದ ಸತಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ, ನೆರೆಹೊರೆಯವರಿಗೆ ಅಕ್ಕರೆಯ ಅಕ್ಕ, ಪ್ರೀತಿಯ ಅಮ್ಮನಾಗಿ ಮಹಿಳೆಯೊಬ್ಬಳು ಹೇಗೆ ಬದುಕಬೇಕೆಂದು ತೋರಿಸಿಕೊಟ್ಟ ಆದರ್ಶ ಮಹಿಳೆ ಬೇಬಿ ಶೆಟ್ಟಿಯವರು. ಕಷ್ಟ ಸಂಕಷ್ಟದಲ್ಲಿದ್ದವರಿಗೆ ಸಮಾಧಾನ ಪಡಿಸಿ ಸಹಾಯ ಮಾಡಿದ ಕೊಡುಗೈ ಅವರು. ಕೈ ಹಿಡಿದ ಗಂಡನನ್ನು ಕಳೆದುಕೊಂಡರೂ ಮಕ್ಕಳಿಗೆ ಉತ್ತಮ ಸಂಸ್ಕಾರ ವಿದ್ಯೆ ಕೊಟ್ಟು ಎಲ್ಲರೂ ಮೆಚ್ಚುವ ರೀತಿಯಲ್ಲಿ ಬೆಳೆಸಿದವರ . ಮೃತರು ಮಗ ರವಿರಾಜ್ ಮಗಳು ವಾಣಿಯವರನ್ನು ಅಗಲಿದ್ದು ಊರ ಪರವೂರ ಜನರು ಕಂಬನಿ ಮಿಡಿಯುತ್ತಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!