ಜನ ಮನದ ನಾಡಿ ಮಿಡಿತ

Advertisement

ಮಂಗಳೂರಿನಲ್ಲಿ ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ಶಾಖೆ ಆರಂಭ

ಮಂಗಳೂರು, ನವೆಂಬರ್‌ 27- ಜೀವ ವಿಮಾ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ಲಿಮಿಟೆಡ್‌ (ಎಫ್‌ಜಿಐಎಲ್‌ಐ) ಮಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಈ ಮೂಲಕ ತನ್ನ ವಿಸ್ತರಣಾ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದೆ. ಮಂಗಳೂರು ಬೆಳವಣಿಗೆಗೆ ಅವಕಾಶವಿರುವ ಮಾರುಕಟ್ಟೆ ಎಂದು ಗುರುತಿಸಿರುವ ಎಫ್‌ಜಿಐಎಲ್‌ಐ ಗ್ರಾಹಕರನ್ನು ಗುರುತಿಸಿ ಅವರಿಗೆ ವಿಮೆ ಸೌಲಭ್ಯ ದೊರೆಯುವಂತೆ ಮಾಡುವುದಲ್ಲದೇ ಸಮಗ್ರ ವಿಮೆ ಪರಿಹಾರಗಳನ್ನು ಸ್ಥಳೀಯರಿಗೆ ಒದಗಿಸಲಿದೆ. ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ದೇಶಾದ್ಯಂತ ಜಾಲ ಹೊಂದಿದ್ದು ಪ್ರಸ್ತುತ 94 ಶಾಖೆ ಮತ್ತು 73ಕ್ಕೂ ಹೆಚ್ಚು ಬ್ಯಾಂಕ್‌ ಪಾಲುದಾರಿಕೆಯ ಶಾಖೆಗಳನ್ನು ಹೊಂದಿದೆ.

ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ನ ಎಂಡಿ ಮತ್ತು ಸಿಇಒ ಅಲೋಕ್‌ ರುಂಗ್ಟಾ ಮಾತನಾಡಿ “ಗ್ರಾಹಕ ಕೇಂದ್ರಿತ ಸೇವೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ನಾವು ನಿರಂತರವಾಗಿ ಹೊಸತನವನ್ನು ಅನ್ವೇಷಿಸುತ್ತಿರುತ್ತೇವೆ. ಮಂಗಳೂರಿನಲ್ಲಿ ಶಾಖೆ ಆರಂಭಿಸುವ ಮೂಲಕ ಇಲ್ಲಿಯ ಗ್ರಾಹಕ ಸ್ಥಳೀಯ ಅಗತ್ಯತೆಗಳಿಗೆ ಹೊಂದಿಕೆಯಾಗುವ ವಿಮೆ ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಜೊತೆಗೆ ಗ್ರಾಹಕ ಸಂಬಂಧವನ್ನು ದೀರ್ಘಾವಧಿಗೆ ಬೆಳೆಸುವ ವಿಶ್ವಾಸಾರ್ಹತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುವುದು. ಡಿಜಿಟಲ್‌ ಪರಿವರ್ತನೆಯಿಂದಾಗಿ ಗ್ರಾಹಕರು ತ್ವರಿತವಾಗಿ ಮತ್ತು ನಂಬಿಕೆಗೆ ಅರ್ಹವಾದ ಸೇವೆಯನ್ನು ಪಡೆಯಲಿದ್ದಾರೆ” ಎಂದು ತಿಳಿಸಿದರು.

ವಿನೂತನ ವಿಮೆ ಉತ್ಪನ್ನಗಳಿಗೆ ಒತ್ತು ನೀಡುವ ಭಾಗವಾಗಿ ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಷುರೆನ್ಸ್‌ ಲಾಂಗ್‌ ಟರ್ಮ್‌ ಇನ್‌ಕಂ ಪ್ಲಾನ್‌ (ಎಲ್‌ಟಿಐಪಿ) ಪರಿಚಯಿಸಿದೆ. ಇದನ್ನು ಜೀವನಕ್ಕೆ ಭದ್ರತೆ ನೀಡುವ ಜೊತೆಗೆ ದೀರ್ಘಾವಧಿಯಲ್ಲಿ ಆರ್ಥಿಕ ಸದೃಢತೆಯನ್ನು ಒದಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮರಣದ ಸಮಯದಲ್ಲಿ, ಬದುಕಿರುವಾಗಲೇ ಮತ್ತು ವಿಮಾ ಅವಧಿ ಮುಗಿದಾಗ ನಿಶ್ಚಿತ ಆದಾಯವನ್ನು ಎಲ್‌ಟಿಐಪಿ ನೀಡಲಿದೆ. ಅಲ್ಲದೇ 50 ವರ್ಷಗಳವರೆಗೆ ದೀರ್ಘಾವಧಿಯ ಆದಾಯವನ್ನು ಖಾತ್ರಿ ಪಡಿಸಲಿದೆ. ವಿಮೆ ಪಾಲಿಸಿದಾರರು ತಮಗೆ ಬೇಕಾದ ಸಮಯದಲ್ಲಿ ಅಂದರೆ ಪಾಲಿಸಿ ಆರಂಭವಾದ ಮರು ತಿಂಗಳಲ್ಲೇ ಪಾಲಿಸಿ ಹಿಂದಕ್ಕೆ ಪಡೆಯಬಹುದು. ಇಲ್ಲವೇ 11ನೇ ವರ್ಷದಿಂದ ಆದಾಯ ಲಾಯಲ್ಟಿ ಜಮೆ ಆಗಲು ಆರಂಭವಾಗಲಿದ್ದು ಪಾಲಿಸಿ ಅವಧಿ ಮುಗಿಯುವವರೆಗೆ ಮುಂದುವರೆಯುತ್ತದೆ.

24ರ ಹಣಕಾಸು ವರ್ಷದಲ್ಲಿ ಎಫ್‌ಜಿಐಎಲ್‌ಐ 59.80 ಕೋಟಿ ರೂಪಾಯಿಗಳ ಬೋನಸ್‌ ನೀಡಿದೆ. ಕಂಪೆನಿಯ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಅಲ್ಲದೇ ಭಾರತದಾದ್ಯಂತ ಸಂಸ್ಥೆ 101,000ಕ್ಕೂ ಹೆಚ್ಚು ಪಾಲಿಸಿದಾರರನ್ನು ಹೊಂದಿದ್ದು ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಪ್ರತೀಕವಾಗಿದೆ. ಕಂಪೆನಿ ಪ್ರಕಟಿಸಿರುವ ಬೋನಸ್‌ ಕಂಪೆನಿಯ ಸದೃಢ ಆರ್ಥಿಕ ಸಾಮರ್ಥ್ಯ ಮತ್ತು ದೀರ್ಘಾವಧಿಯ ಬದ್ಧತೆಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

error: Content is protected !!