ಜೊತೆಯಲ್ಲಿ ವಾಸಿಸುತ್ತಿದ್ದ ಸಂಗಾತಿಯನ್ನು ಬರ್ಬರವಾಗಿ ಕೊಂದ ಘಟನೆ ಜಾರ್ಕಂಡ್ ನಲ್ಲಿ ನಡೆದಿದೆ. ಕೊಂದ ಬಳಿಕ 40ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಎಸೆದಿದ್ದು, ದೆಹಲಿಯ ಶ್ರದ್ಧಾ ವಾಕರ್ ನ ಹತ್ಯೆಯನ್ನು ಹೋಲಿಸುವ ಇನ್ನೊಂದು ಕೃತ್ಯಕ್ಕೆ ಆರೋಪಿ ನರೇಶ್ ಭೇಂಗ್ರ ಕಾರಣನಾಗಿದ್ದಾನೆ.

ನರೇಶ್ ಮತ್ತು ಹತ್ಯೆಯಾದ ಗಂಗಿ ಮೂಲತಃ ಝಾರ್ಖಂಡ್ ನಿವಾಸಿಗಳಾಗಿದ್ದು, ಎರಡು ವರ್ಷಗಳಿಂದ ತಮಿಳುನಾಡಿನಲ್ಲಿ ವಾಸವಾಗಿದ್ದರು. ನರೇಶ್ ಈ ನಡುವೆ ಝಾರ್ಖಂಡ್ ನಲ್ಲಿ ಮದುವೆಯಾಗಿದ್ದು, ಪತ್ನಿಯನ್ನು ಊರಿನಲ್ಲಿ ಬಿಟ್ಟು ಬಂದು ಗಂಗಿಯೊಂದಿಗೆ ವಾಸವಾಗಿದ್ದ. ಎರಡು ವಾರಗಳ ಹಿಂದೆ ಇಬ್ಬರು ಊರಿಗೆ ಮರಳಿದ್ದಾರೆ. ಈ ವೇಳೆ ಗಂಗಿ ಆತನ ಮನೆಗೆ ಕರೆದುಕೊಂಡು ಹೋಗಲು ಒತ್ತಾಯಿಸಿದ್ದಾಳೆ. ತನ್ನ ಮದುವೆಯ ವಿಷಯ ತಿಳಿಯುವ ಭಯದಲ್ಲಿ ನರೇಶ್ ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂಡಿದ್ದಾನೆ. ನರೇಶ್ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ತನ್ನ ಕೌಶಲ್ಯ ಬಳಸಿ ಮಹಿಳೆಯ ದೇಹವನ್ನು 40ಕ್ಕೂ ಹೆಚ್ಚು ಭಾಗಗಳಾಗಿ ಕತ್ತರಿಸಿದ್ದಾನೆ.
ಘಟನೆ ನಡೆದು ಎರಡು ವಾರಗಳು ಕಳೆದಿದ್ದು, ನ. 24ರಂದು ನಾಯಿಯೊಂದು ದೇಹದ ಭಾಗವನ್ನು ಕಚ್ಚಿಕೊಂಡು ಬಂದಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಈ ವೇಳೆ ಪೊಲೀಸರು ಶೋಧಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಧ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಖುಂಟಿ ಪೊಲೀಸ್ ವರಿಷ್ಟಾಧಿಕಾರಿ ಅಮನ್ ಕುಮಾರ್ ತಿಳಿಸಿದ್ದಾರೆ.



