ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಮಳೆಗಾಲ ಅಡಿ ಇಡುತ್ತಿರುವಂತೆಯೇ ಎರಡನೇ ದಿನವೂ ಟೈಗರ್ ಕಾರ್ಯಾಚರಣೆ ಮುಂದುವರಕೆ

ಮಳೆಗಾಲ ಅಡಿ ಇಡುತ್ತಿರುವಂತೆಯೇ ಎರಡನೇ ದಿನವೂ ಟೈಗರ್ ಕಾರ್ಯಾಚರಣೆಯನ್ನು ಮಂಗಳೂರು ಮಹಾ ನಗರ ಪಾಲಿಕೆ ಮುಂದುವರೆಸಿದೆ. ಮಹಾನಗರ ಪಾಲಿಕೆ ಆಯುಕ್ತರ ಆದೇಶದ ಮೇರೆಗೆ, ಕಂದಾಯ ಇಲಾಖೆ ಉಪಾಯುಕ್ತರಾದ ಶ್ರೀಮತಿ ಅಕ್ಷತಾ ಕೆ ನೇತೃತ್ವದಲ್ಲಿ ಲೇಡಿಹಿಲ್ ವ್ರತ್ತದಿಂದ ಚಿಲಿಂಬಿ ಆಸುಪಾಸು ರಸ್ತೆ, ಫುಟ್ಪಾತ್ ಸ್ಥಳ ಅತಿಕ್ರಮಣ ಮಾಡಿದ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಮಾಡಲಾಯಿತು.

ಆಮ್ಲೆಟ್ ಅಂಗಡಿ ಇಟ್ಟು ವ್ಯಾಪಾರ ಮಾಡುವವರ ಸ್ಥಳದಲ್ಲಿ ಬಿಯರ್ ಬಾಟಲುಗಳು ಸಹಿತ ಇತರ ಬಾಟಲುಗಳ ರಾಶಿ ಕಂಡು ಬಂತು.ಬೀದಿ ಬದಿ ಗೂಡಂಗಡಿ ಮೂಲಕ ವ್ಯಾಪಾರ ಮಾಡುವವರು ಆಮ್ಲೆಟ್ ಪೂರೈಸುತ್ತ ಜೊತೆಗೆ ಅಮಲು ಪದಾರ್ಥ ಸೇವನೆಗೂ ಅವಕಾಶ ಕೊಡುತ್ತಿರುವುದು ಇಂದಿನ ಕಾರ್ಯಾಚರಣೆಯಲ್ಲಿ ಸಾರ್ವಜನಿಕವಾಗಿ ಬೆಳಕಿಗೆ ಬಂದಿತು. ಗೂಡಂಗಡಿ ವ್ಯಾಪಾರಿಗಳು ತಮ್ಮಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕೂಡಾ ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಕುಡಿದು ಬಿಸಾಡಿದ ಬಾಟಲುಗಳಲ್ಲಿ, ಬೊಂಡದ ತ್ಯಾಜ್ಯಗಳಲ್ಲಿ ನೀರು ನಿಂತು ಅವು ಸೊಳ್ಳೆಗಳ ಉತ್ಪಾದನಾ ತಾಣಗಳಾಗಿದ್ದವು.

ಮಳೆಗಾಲದಲ್ಲಿ ಅವು ಮಲೇರಿಯಾ, ಡೆಂಗ್ಯೂ ಮತ್ತಿತರ ಸೊಳ್ಳೆಗಳಿಂದ ಹರಡುವ ರೋಗಗಳಿಗೆ ಅನುಕೂಲಕರ ತಾಣವಾಗಿರುವುದೂ ಕಾರ್ಯಾಚರಣೆ ವೇಳೆ ಕಂಡು ಬಂದಿತು.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!