ನಿನ್ನೆ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಬರ್ಬರ ಕೊಲೆ ನಡೆದಿದ್ದು ಬಳಿಕ ಮೃತದೇಹವನ್ನು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ರವಾನಿಸಿದ್ದರು.

ನಿನ್ನೆ ರಾತ್ರಿ ಆಸ್ಪತ್ರೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನಸೇರಿದ್ದು ಬಳಿಕ ಪೋಲಿಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ಕುತ್ತಾರ್ ಮದನಿ ನಗರದ ಮಸೀದಿಯಿಂದ ಮೃತದೇಹವಿದ್ದ ಆಂಬುಲೆನ್ಸ್ ಹೊರಟಿದ್ದು ಕಲ್ಲಾಪು,ಹಾಗೂ ರಸ್ತೆಯ ಬದಿಯಲ್ಲಿರುವ ಮಸೀದಿ ಬಳಿ ಅಂಬ್ಯೂಲೆಸ್ ನಿಲ್ಲಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಮಂಗಳೂರಿನ ದೇರಳಕಟ್ಟೆಯಿಂದ ಹೊರಟು ಕಲ್ಲಾಪು,ಪಂಪ್ ವೆಲ್,ನಂತೂರು ಮೂಲಕ ಬಂಟ್ವಾಳದ ಕೋಳ್ತಮಜಲುಗೆ ಮೃತದೇಹ ಮೆರವಣಿಗೆ ಮೂಲಕ ತೆರಳಿದೆ. ನಾಲ್ಕು ಆಂಬುಲೆನ್ಸ್ ಮೂಲಕ ಮೃತದೇಹ ರವಾನಿಸಿದ್ದು ಖಾಕಿ ಸರ್ಪ ಗಾವಲಿನಲ್ಲಿ ಮೆರವಣಿಗೆ ಮೂಲಕ ರವಾನಿಸಿದ್ದು ಜೊತೆಗೆ ದ.ಕ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.



