ತುಳುನಾಡು ನಂಬಿಕೆ, ಸಂಪ್ರದಾಯ ಮತ್ತು ದೈವ ಆರಾಧನೆಯ ಜೀವಂತ ನೆಲೆಬೀಡು. ಪೀಳಿಗೆಗಳಿಂದ ಸಾಗಿಬಂದ ದೈವ ಆರಾಧನೆಯ ಸಂಸ್ಕೃತಿ ಇಂದು ಕೂಡ ಪ್ರತಿಯೊಂದು ಹಳ್ಳಿ-ಗಲ್ಲಿಗಳಲ್ಲಿಯೂ ಜೀವಂತವಾಗಿದೆ. ಅದರಂತೆಯೇ ಮಜಿಬೈಲು ಮಂಜೇಶ್ವರದ ಶ್ರೀ ಗುಳಿಗ ಮತ್ತು ಶ್ರೀ ನಾಗರಾಜ ನಾಗಕನ್ನಿಕಾ ರಕ್ತೇಶ್ವರಿ ಬನ ಕೂಡಾ ಒಂದು.

ಮಜಿಬೈಲುವಿನ ಶ್ರೀ ಗುಳಿಗ ಬನದಲ್ಲಿ ವರ್ಷಂಪ್ರತಿ ನಡೆಯುವ ಕೋಲೋತ್ಸವವು ಜನವರಿ 19ರಂದು ರಾತ್ರಿ 7 ಗಂಟೆಗೆ ವಿಜೃಂಭನೆಯಿಂದ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿ. 20 ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ. ಹಾಗಾಗಿ ಈ ಎಲ್ಲಾ ಕೈಂಕರ್ಯಗಳಿಗೆ ಭಕ್ತಾಧಿಗಳು ಆಗಮಿಸಬೇಕಾಗಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.



