ಕಂಬಳ ಕೇವಲ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಲ್ಲ, ಅದು ಇಡೀ ದೇಶದ ಹೆಮ್ಮೆ ಎಂದು ಸಾರುವ ಮೂಲಕ ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪನ್ನು ನೀಡಿದೆ.

ಈ ತೀರ್ಪನ್ನು ಕಂಬಳದ ಇತಿಹಾಸದಲ್ಲಿ ಒಂದು “ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ” ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಕೋಶಾಧಿಕಾರಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಂಬಳದ ಉಳಿವಿಗಾಗಿ ಹೋರಾಡಿದ ಕಂಬಳ ಅಸೋಶಿಯೇಶನ್, ಸಮಿತಿ, ಎಲ್ಲ ಕಂಬಳದ ವ್ಯವಸ್ಥಾಪಕರು, ಕೋಣಗಳ ಯಜಮಾನರು, ಅಭಿಮಾನಿಗಳು ಮತ್ತು ಕಂಬಳ ಪ್ರೇಮಿಗಳ ದಶಕಗಳ ಶ್ರಮಕ್ಕೆ ನ್ಯಾಯ ಸಿಕ್ಕಿದೆ. ವಿಶೇಷವಾಗಿ ರಾಜ್ಯ ಕಂಬಳ ಅಸೋಶಿಯೇಶನ್ ಅಧ್ಯಕ್ಷ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ, ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಮತ್ತು ನೇತೃತ್ವದಲ್ಲಿ ನಡೆದ ಕಾನೂನು ಹೋರಾಟ ಮತ್ತು ಸಂಘಟನೆಗೆ ದೊಡ್ಡ ಮಟ್ಟದ ಯಶಸ್ಸು ದೊರೆತಿದೆ. ಬೆಂಗಳೂರು ಮತ್ತು ಶಿವಮೊಗ್ಗ ಜೆಲ್ಲೆಗಳಲ್ಲೂ ಕಂಬಳ ನಡೆಸಲು ಎದುರಾಗಿದ್ದ ಅಡೆತಡೆಗಳು ಈಗ ನಿವಾರಣೆಯಾದಂತಾಗಿದೆ ಎಂದು ತಿಳಿಸಿದ್ದಾರೆ.



