ಜನ ಮನದ ನಾಡಿ ಮಿಡಿತ

Advertisement

ಮೋಟಾರ್ ಸೈಕಲ್ ರೇಸಿಂಗ್ ಸ್ಪರ್ಧೆ ವೇಳೆ ಅಪಘಾತ: ಬೆಂಗಳೂರಿನ 13 ವರ್ಷದ ರೈಡರ್ ಶ್ರೇಯಸ್ ಹರೀಶ್ ಸಾವು

ಕನಸುಗಳು ಚಿಗುರುವ ಮುನ್ನವೇ ಅಂತ್ಯಕಂಡ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿ ಶ್ರೇಯಸ್, ಕೇವಲ 13 ವರ್ಷಕ್ಕೆ ತನ್ನ ಜೀವನದ ಪಯಣವನ್ನು ಮುಗಿಸಿದ್ದಾರೆ. ಮದ್ರಾಸ್​ ಇಂಟರ್​ನ್ಯಾಷನಲ್ ಸರ್ಕ್ಯೂಟ್​ನಲ್ಲಿ ನಡೆಯುತ್ತಿದ್ದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ಮೋಟಾರ್‌ ಸೈಕಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಯಸ್ ಹರೀಶ್ ಭಾಗವಹಿಸಿದ್ದರು. ಶನಿವಾರ ನಡೆದ ಚಾಂಪಿಯನ್​ಶಿಪ್​​​ನ ಮೂರನೇ ಸುತ್ತಿನ ವೇಳೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಚೆನ್ನೈನಲ್ಲಿ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರೇಸಿಂಗ್ ಸ್ಪರ್ಧೆಯಲ್ಲಿ ಶ್ರೇಯಸ್ ಶನಿವಾರ ಬೆಳಗ್ಗೆ ಒಂದು ಹಂತವನ್ನು ಕ್ವಾಲಿಫೈ ಆಗಿದ್ದರು. ಬಳಿಕ ಮೂರನೇ ರೌಂಡಿನಲ್ಲಿ ಅಪಘಾತಕ್ಕೀಡಾಗಿದ್ದರಿಂದ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣವೇ ಆಂಬ್ಯುಲನ್ಸ್​ನಲ್ಲಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ವೈದ್ಯರು ಪರೀಕ್ಷಿಸಿ, ಶ್ರೇಯಸ್ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.

ಶ್ರೇಯಸ್ ತನ್ನ ರೇಸಿಂಗ್ ಪ್ರತಿಭೆಯಿಂದ ಹೊಸ ಅಲೆ ಸೃಷ್ಟಿಸುತ್ತಿದ್ದರು. ಘಟನೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಕಿರಿ ಮತ್ತು ಪ್ರತಿಭಾನ್ವಿತ ರೈಡರ್​ ಅನ್ನು ಕಳೆದುಕೊಂಡಿರುವುದು ದುರಂತ ಎಂದು ಎಂಎಂಎಸ್​ಸಿ ಅಧ್ಯಕ್ಷ ಅಜಿತ್ ಥಾಮಸ್ ಕಂಬಿನಿ ಮಿಡಿದಿದ್ದಾರೆ. ಈ ಮೋಟಾರ್‌ ಸೈಕಲ್ ರೇಸ್ ಚಾಂಪಿಯನ್​ಶಿಪ್​ಅನ್ನು ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿತ್ತು. ಘಟನೆಯ ಬಳಿಕ ಈ ಟೂರ್ನಿಯನ್ನು ರದ್ದುಗೊಳಿಸಿ, ರೈಡರ್ ಸಾವಿಗೆ ಎಂಎಂಎಸ್​ಸಿ ಸಂತಾಪ ಸೂಚಿಸಿದೆ.

One Response

  1. ಯಾಕೆ ಸಾವು ಸಂಭಾವಿಸಿತು. ಹೆಲ್ಮೆಟ್ ಡೂಪ್ಲಿಕೇಟ್ ಆಗಿತ್ತಾ ❓️ಇಷ್ಟು ದೊಡ್ಡ ಮಟ್ಟದ compitation ಇರುವಾಗ ಕಾಂಪಿಟೇಷನ್ ಭಾಗವಹಿಸುವ ಎಲ್ಲಾರ ಹೆಲ್ಮೆಟ್, ಧರಿಸುವಂತಹ ಎಲ್ಲಾ ಸೇಫ್ಟಿ ಶೂಗಳನ್ನು ಪರಿಶೀಲಿಸಿ ನಂತರ ಅವಕಾಶ ಕಲ್ಪಿಸಬೇಕು. ಇಲ್ಲಾಂದ್ರೆ ಈ ರೀತಿ ಅವಘಡ ಸಂಭವ ಜಾಸ್ತಿ ಆಗುತ್ತೆ.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!