ಜನ ಮನದ ನಾಡಿ ಮಿಡಿತ

Advertisement

ದ್ವಿಚಕ್ರ ,ತ್ರಿಚಕ್ರ ವಾಹನಗಳ ಬಿಡಿಭಾಗಗಳ ದಾಸ್ತಾನು ಹಾಗೂ ವ್ಯಾಪಾರ ಮಳಿಗೆಯಿಂದ 39,370 ರೂ. ನಗದು, 4 ಮೊಬೈಲ್ ಫೋನ್ ಕಳವು

ಮಂಗಳೂರು; ಬಂದರ್‌ನ ಅಜೀಜುದ್ದೀನ್ ರಸ್ತೆಯಲ್ಲಿ ಮೊಹಮ್ಮದ್ ಮುದಸ್ಸಿರ್ ಅವರಿಗೆ ಸೇರಿದ ಟಿ.ವಿ.ಎಸ್. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಿಡಿಭಾಗಗಳ ದಾಸ್ತಾನು ಹಾಗೂ ವ್ಯಾಪಾರ ಮಳಿಗೆಯಿಂದ 39,370 ರೂ. ನಗದು, 4 ಮೊಬೈಲ್ ಫೋನ್ ಮತ್ತು ಚಾರ್ಜರ್ ಹಾಗೂ ಇಂಟರ್‌ನೆಟ್ ಮೋಡೆಮ್ ಕಳವಾಗಿದೆ.


ಆ. 26ರಂದು ಸಂಜೆ 6.30ಕ್ಕೆ ಮಳಿಗೆಯನ್ನು ಮುಚ್ಚಿ ಹೋಗಿದ್ದು, 27ರಂದು ರವಿವಾರವಾದ್ದರಿಂದ ಮಳಿಗೆ ತೆರೆದಿರಲಿಲ್ಲ. 28ರಂದು 9ಗಂಟೆಗೆ ಮಳಿಗೆ ತೆರೆದು ನಗದು ಕೌಂಟರಿಗೆ ಹೋದಾಗ ಕೌಂಟರಿನ ಹಣ ಇಡುವ ಡ್ರಾವರ್ ಬೀಗ ತೆರೆದ ಸ್ಥಿತಿಯಲ್ಲಿತ್ತು. ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದ ಅನಂತರ ಪರಿಶೀಲಿಸಿದಾಗ ನಗದು ಹಾಗೂ ಮೊಬೈಲ್ ಫೋನ್, ಚಾರ್ಜರ್ ಇಂಟರ್‌ನೆಟ್ ಮೋಡೆಮ್ ಕಳವಾಗಿದ್ದು ತಿಳಿದುಬಂದಿದೆ.ಅನ0ತರ ಸಂಪೂರ್ಣ ಮಳಿಗೆಯನ್ನು ಪರಿಶೀಲಿಸಿದಾಗ ಮಳಿಗೆಯ ಎಡಭಾಗದಲ್ಲಿದ್ದ ಬಾಗಿಲಿನ ಪಕ್ಕದ್ದಲ್ಲಿ ತಗಡು ಶೀಟನ್ನು ಕತ್ತರಿಸಿ ತೆಗೆದಿರುವುದು ಕಂಡುಬAದಿದೆ. ಅದರ ಮೂಲಕ ಯಾರೋ ಕಳ್ಳರು ಒಳ ಪ್ರವೇಶಿಸಿ ಕಳವು ಮಾಡಿದ್ದಾರೆ.


ಈ ಕುರಿತಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!