ಜನ ಮನದ ನಾಡಿ ಮಿಡಿತ

Advertisement

ಉಡುಪಿಯಲ್ಲಿ ಹುಲಿವೇಷ ತೊಟ್ಟು ಕುಣಿಯುತಿದ್ದ ವೇಳೆ ನಡೆದ ಅಚ್ಚರಿಯ ಘಟನೆ

ಹುಲಿ ವೇಷವೆಂದರೆ ಬರಿ ಕುಣಿತವಲ್ಲ, ಅದು ಕರಾವಳಿಗರ ಭಾವನೆ ಹಾಗೂ ಆರಾಧನೆಯ ರೂಪವಾಗಿದೆ.

ಕಡಲನಗರಿಯಲ್ಲಿ ನಡೆಯುವಂತಹ ಪ್ರತಿಯೊಂದು ಹಿಂದೂ ಸನಾತನ ಧರ್ಮದ ಆಚರಣೆಗಳಲ್ಲಿ ಹುಲಿ ವೇಷ ಮಿಂಚುತ್ತದೆ. ಕೆಲವರು ಹರಕೆ ರೂಪದಲ್ಲಿ ಹುಲಿ ವೇಷವನ್ನು ಧಾರಣೆ ಮಾಡುವ ವಾಡಿಕೆ ಮಂಗಳೂರು, ಉಡುಪಿಗಳಲ್ಲಿ ಹೆಚ್ಚಾಗಿವೆ. ಅಂತೆಯೇ ಈ ವರ್ಷದ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ನಿಟ್ಟೂರಿನಲ್ಲಿ ಹುಲಿವೇಷ ಸ್ಪರ್ಧೆ ನಡೆದಿದ್ದು, ಈ ಹುಲಿವೇಷ ತೊಟ್ಟು ಕುಣಿಯುತಿದ್ದ ವೇಳೆ ವೇಷಧಾರಿ ಮೇಲೆ ಆವೇಶ ಬಂದ ಅಚ್ಚರಿ ಘಟನೆ ನಡೆದಿದೆ.


ಮೈಮೇಲೆ ಆವೇಶ ಬಂದು ವೇದಿಕೆಗೆ ಹಾಕಿದ್ದ ರೆಡ್ ಕಾರ್ಪೆಟ್ ನ್ನ ಬಾಯಲ್ಲಿ ಕಚ್ಚಿ ಹರಿದು ಹಾಕಿದ್ದಾರೆ. ಈ ಸಂದರ್ಭ ಹುಲಿವೇಷಧಾರಿಯನ್ನ ನಿಯಂತ್ರಣಕ್ಕೆ ತರುವಲ್ಲಿ ಸಹ ವೇಷಧಾರಿಗಳು ಹರಸಾಹಸ ಪಟ್ಟಿದ್ದು, ಈ ವೇಳೆ ಸಹವೇಷಧಾರಿಗೂ ಕಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇನ್ನೂ ಹರಕೆ ಹೊತ್ತು ವೇಷಹಾಕುವವರ ಮೈಮೇಲೆ ಆವೇಶ ಬರುತ್ತದೆ ಎಂಬ ಪ್ರತೀತಿ ಕರಾವಳಿಗರಲ್ಲಿದೆ. ಆವೇಶ ಬಂದಲ್ಲಿ ವೇಷಧಾರಿಯನ್ನ ನಿಯಂತ್ರಣಕ್ಕೆ ತರದೇ ಹೋದ ಪಕ್ಷದಲ್ಲಿ ಕಾಡಿಗೆ ಓಡಿಹೊಗಬಹುದು, ಇನ್ನೊಂದು ಜೀವಿಯ ಮೇಲೆ ಆಕ್ರಮಣ ಮಾಡಬಹುದು ಎಂಬ ನಂಬಿಕೆ ತುಳುವರದ್ದಾಗಿದೆ.
ಇನ್ನೂ ಉಡುಪಿಯಲ್ಲಿ ನಡೆದ ಘಟನೆ ಎಲ್ಲರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡಿಸಿದಂತು ಸತ್ಯದ ಮಾತಾಗಿದೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!