ಮುಲ್ಕಿ:2023ನೇ ಸಾಲಿನ ಮುಲ್ಕಿ ಸೀಮೆ ಅರಸು ಕಂಬಳದ ದಿನಾಂಕವನ್ನು ನಿರ್ಧರಿಸುವ ಬಗ್ಗೆ ಪಡುಪಣಂಬೂರಿನ ಮುಲ್ಕಿ ಅರಮನೆ ಧರ್ಮ ಚಾವಡಿಯಲ್ಲಿ ಸೀಮೆಯ ಅರಸು ಕಂಬಳ ಸಮಿತಿ ಹಾಗೂ ಗ್ರಾಮಸ್ಥರ ಸಭೆ ನಡೆಯಿತು.

ಸಭೆಯಲ್ಲಿ ಡಿ. 24ರಂದು ಸೀಮೆಯ ಅರಸು ಕಂಬಳ ನಡೆಸಲು ನಿರ್ಧರಿಸಲಾಯಿತು. ನವೆಂಬರ್ 19ರಂದು ಕಂಬಳಗದ್ದೆಯಲ್ಲಿ ಕೋಣಗಳನ್ನು ಇಳಿಸುವ ಕಾರ್ಯಕ್ರಮ,ಡಿಸೆಂಬರ್ 17ರಂದು ಕುದಿ ಕಂಬಳ, ನಡೆಸುವುದಾಗಿ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ ಸುಮಾರು 400 ವರ್ಷ ಇತಿಹಾಸದ ಸೀಮೆಯ ಅರಸು ಕಂಬಳವನ್ನು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಸಭೆಯಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಕಿರಣ್ ಶೆಟ್ಟಿ ಕೋಲ್ನಾಡ್ ಗುತ್ತು, ವಕೀಲರಾದ ಚಂದ್ರಶೇಖರ್, ಸಮಿತಿಯ ಶ್ಯಾಮ್ ಪ್ರಸಾದ್, ಬಂಕಿ ನಾಯಕರು, ಅನಿಲ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಸತೀಶ್ ಶೆಟ್ಟಿ, ಹೇಮನಾಥ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.



