ಜನ ಮನದ ನಾಡಿ ಮಿಡಿತ

Advertisement

ಆಳ್ವಾಸ್ ಕಾಲೇಜು ಪದವಿ ಇಂಗ್ಲಿಷ್ ವಿಭಾಗದಿಂದ ಸರಣಿ ಉಪನ್ಯಾಸ

ಮೂಡುಬಿದರೆ: ‘ಪಠ್ಯಕ್ರಮದ ನೈಜ ಭಾಗೀದಾರರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅವರೇ ಬಲಿಪಶು ಆಗುತ್ತಿದ್ದಾರೆ’ ಎಂದು ಪುತ್ತೂರು ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಹೇಳಿದರು.


ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಇಂಗ್ಲಿಷ್ ವಿಭಾಗವು ಹಮ್ಮಿಕೊಂಡ ಸರಣಿ ಅತಿಥಿ ಉಪನ್ಯಾಸ ಹಾಗೂ ‘ವೇಟಿಂಗ್ ಫಾರ್ ಗೊಡೊಟ್’ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಠ್ಯಕ್ರಮವನ್ನು ತಿಳಿದುಕೊಳ್ಳುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ಆದರೆ, ಅವರಲ್ಲಿ ಪ್ರಶ್ನಿಸುವ ಮನೋಭಾವ ಕಾಣದಾಗಿದೆ. ಇನ್ನೊಂದೆಡೆ ಪಠ್ಯಕ್ರಮ ರೂಪಿಸುವ ‘ಕಟ್ ಪೇಸ್ಟ್ ‘ ತಜ್ಞರು ಕಂಪ್ಯೂಟರ್ ಬರುವ ಮೊದಲೇ ಇದ್ದರು’ ಎಂದು ವಿವರಿಸಿದರು.
‘ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ತರಗತಿ ಚಟುವಟಿಕೆ ಮಧ್ಯೆ ಅಂತರವಿದೆ. ಪಠ್ಯದಲ್ಲಿ ಘೋಷಿತ ಧ್ಯೇಯಗಳಿವೆ. ಕಲಿಕೆ ಮೇಲೆ ಕಲಿಕೆ ಕಟ್ಟಬೇಕು. ಪ್ರಚಲಿತ ವಿದ್ಯಮಾನಕ್ಕೆ ಶಿಕ್ಷಣ ಸ್ಪಂದಿಸಬೇಕು. ಆದರೆ, ವಿಶ್ವವಿದ್ಯಾಲಯ ಇಷ್ಟು ಸಂವೇದನೆ ಹೊಂದಿದೆಯೇ?’ ಎಂದು ಅವರು ಪ್ರಶ್ನಿಸಿದರು.
‘ಇಂದು ಜ್ಞಾನದ ಮೊದಲ ಸ್ಪರ್ಶ ತರಗತಿಯಲ್ಲಿ ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಏನು ಕಲಿಸುತ್ತೀರಿ ಎಂಬುದಕ್ಕಿಂತ ಹೇಗೆ ಕಲಿಸುತ್ತೀರಿ’ ಎಂಬುದು ಮುಖ್ಯ ಎಂದ ಅವರು, ‘ನೀವೇ ಬರೆಯಲು ಇನ್ನೊಬ್ಬರನ್ನು ಅವಲಂಬಿಸುತ್ತಿದ್ದೀರಿ ಎಂದಾದರೆ, ನಿಮ್ಮ ಮಕ್ಕಳಿಗೆ ಏನು ಬೋಧನೆ ಮಾಡುತ್ತಿದ್ದೀರಿ’ ಎಂದು ಕುಟುಕಿದರು.
‘ಶಿಕ್ಷಣದ ಗುರಿ ಮತ್ತು ದಾರಿ ಮಧ್ಯೆ ಹೊಂದಾಣಿಕೆ ತಪ್ಪಿದೆ. ಪ್ರಕ್ರಿಯೆ ಮತ್ತು ಉದ್ದೇಶಗಳ ನಡುವೆ ಸಮತೋಲನ ಇಲ್ಲ. ಉತ್ತಮ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಕಟ್ಟಬೇಕು’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ನಂಬಿಕೆಗಳನ್ನು ಕಾಲಕಾಲಕ್ಕೆ ಪ್ರಶ್ನಿಸಿ ಮರುರೂಪುಗೊಳಿಸಿದಾಗ ಮಾತ್ರ ಪ್ರಗತಿ ಸಾಧ್ಯ’ ಎಂದು ಹೇಳಿದರು.
‘ನಂಬಿಕೆಯ ಬಲೆಯು ನಮ್ಮನ್ನು ನಡೆಸಿದರೂ, ನಾವು ಹೇಗೆ ಹೆಜ್ಜೆ ಇಡುತ್ತೇವೆ ಎಂಬುದು ಮುಖ್ಯ’ ಎಂದರು.
‘ಪ್ರತಿ ವ್ಯಕ್ತಿಯ ಬದುಕಿನ ಪಯಣ ವಿಭಿನ್ನ. ಉತ್ತಮ ಸಂಬಂಧಗಳನ್ನು ನಾವು ಬದುಕಿನಲ್ಲಿ ಪಡೆದಿದ್ದೇವೆಯೇ ಎಂಬುದು ಬಹಳ ಮುಖ್ಯವಾಗುತ್ತದೆ’ ಎಂದರು.


ಉಜಿರೆ ಎಸ್ ಡಿಎಂ (ಸ್ವಾಯತ್ತ) ಕಾಲೇಜು ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಸೂರ್ಯನಾರಾಯಣ ಭಟ್ ‘ವೇಟಿಂಗ್ ಫಾರ್ ಗೊಡೊಟ್’ ಕುರಿತು ಉಪನ್ಯಾಸ ನೀಡಿದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ, ಸಹಾಯಕ ಪ್ರಾಧ್ಯಾಪಕ ಸಂದೇಶ್ ಇದ್ದರು.
ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿದರು. ರೇಷ್ಮಾ ಹಾಗೂ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಚಂದನಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!