ಬಂಟರ ಸಂಘ, ಬೆಂಗಳೂರಿನ ಸಮಾಜ ಸೇವಾ ಸಮಿತಿ ಮತ್ತು ಬಂಟ್ಸ್ ಸೇವಾದಳ ಜಂಟಿಯಾಗಿ ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ನೆತ್ತರ ನೆರವು – ರಕ್ತದಾನ ಶಿಬಿರವನ್ನು ಏರ್ಪಡಿಸಿ, ನಾವು ರಕ್ತದಾನ ಮಾಡಿ ಎಂದು ಹೇಳಿದಾಗ, ತುಂಬಾ ದಿನಗಳ ರಜೆಯ ಸಂದರ್ಭವಾದರೂ ತಾವೆಲ್ಲರೂ ನಮ್ಮ ಜೊತೆಗೂಡಿ, 203 ಯೂನಿಟ್ ರಕ್ತವನ್ನು ಸಂಗ್ರಹಿಸಲು ಸಹಕರಿಸಿದಿರಿ.

ಇದರಿಂದ ನಾವೆಲ್ಲರೂ ಒಂದಷ್ಟು ಜನರ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾದೆವು. ನಾರಾಯಣ ನೇತ್ರಾಲಯದ ಸಹಕಾರದೊಂದಿಗೆ ನಡೆದ ನೇತ್ರದಾನ ನೋಂದಣಿ ಶಿಬಿರದಲ್ಲಿ 75ಕ್ಕೂ ಹೆಚ್ಚು ಜನರು ನೇತ್ರದಾನ ನೋಂದಣಿಯನ್ನು ಮಾಡಿಕೊಂಡರು.
ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ಸರ್ವರಿಗೂ ಆತ್ಮೀಯ ಧನ್ಯವಾದಗಳು.



