ಜನ ಮನದ ನಾಡಿ ಮಿಡಿತ

Advertisement

ದೈವಗಳ ಆರಾಧನೆಗೆ ಸಿದ್ಧತೆ; ಪ್ರಥಮ ಹಂತದ ಕಾಮಗಾರಿಗೆ ಚಾಲನೆ

ಸಾಲೆತ್ತೂರು; ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಶ್ರೀ ಧರ್ಮ ದೈವಗಳ ಪುನರುತ್ಥಾನದ ಬಗ್ಗೆ ಕೊಲ್ಲಾಡಿ ಶಾರದಾ ನಾರಾಯಣ ನಿಲಯದಲ್ಲಿ ಸಭೆ ನಡೆದಿದೆ.

ಸುಮಾರು 500ವರ್ಷಗಳಿಂದಲೂ ಪುರಾತನವಾಗಿ ಉತ್ತರದ ಕೊಡಿಯಲ್ ಗುತ್ತಿನಿಂದ ವಲಸೆ ಬಂದು ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಎಂಬಲ್ಲಿ ನೆಲೆನಿಂತು ವಿಟ್ಲ ಅರಸರ ತುಂಡರಸರಾಗಿ ಊರಿನಲ್ಲಿ ಗೌರವದ ಸ್ಥಾನ ಹೊಂದಿದ ಕುಟುಂಬವಾಗಿತ್ತು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ.

ಇದೀಗ ದೈವಾಗಳಾದ ನಾಗದೇವರು ರಕ್ತೇಶ್ವರಿ, ಜುಮಾದಿ ಬಂಟ, ಪಂಜುರ್ಲಿ ಕಲ್ಲುರ್ಟಿ ರಾಜನ್ ಗುಳಿಗವನ್ನೂ ಆರಾಧನೆ ಮಾಡಲು ದೈವಜ್ಞರು ಸೂಚಿಸಿದ ಹಿನ್ನೆಲೆಯಲ್ಲಿ ಸಮಿತಿ ರಚನೆ ಮತ್ತು ಇತರ ಕೆಲಸಗಳಿಗೆ ಸಭೆ ಕರೆಯಲಾಗಿದೆ. ಈ ಸಭೆಯ ಅಧ್ಯಕ್ಷತೆ ಕೊಲ್ಲಾಡಿ ರಾಮಯ್ಯ ಶೆಟ್ಟಿ ವಹಿಸಿದ್ದರು. ಶ್ರೀ ಸದಾಶಿವ ದೇವಸ್ಥಾನದ ಅರ್ಚಕರು ಮಾರ್ಗದರ್ಶಕರು ಆದ ವೇದಮೂರ್ತಿ ಶ್ರೀ ಭಾರ್ಗವ ಉಡುಪರು ಸಲಹೆ ಸೂಚನೆ ನೀಡಿದ್ದಾರೆ.

ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಯಿತು ಹಿರಿಯರಾದ ಕೊರಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ನೂತನ ಆಡಳಿತ ಟ್ರಸ್ಟ್ ರಚಿಸಲಾಯಿತು
ಈ ಸಂದರ್ಭದಲ್ಲಿ ಶೀನಪ್ಪ ಆಳ್ವಾ ಸದಾಶಿವ ದೇವಸ್ಥಾನದ ಟ್ರಸ್ಟಿ ಪಾಳ್ತಾಜೆ ದೇವಿದಾಸ ಶೆಟ್ಟಿ, ಬಾಲಕೃಷ್ಣ ರೈ ಕೃಷ್ಣಾ ಕಾಂಪ್ಲೆಕ್ಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೊಲ್ಲಾಡಿ ಬಾಲಕೃಷ್ಣ ರೈ ಅವರು ನಿರೂಪಿಸಿದರು

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!