ಲಯನ್ಸ್ ಕ್ಲಬ್ ಮಂಚಿ ಇದರ ಆಶ್ರಯದಲ್ಲಿ ಸಾಲೆತ್ತೂರು ವಲಯದ ಶೌರ್ಯ ತಂಡ ಮತ್ತು ಇತರೇ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಾಲೆತ್ತೂರು ವಲಯದ ಕುಡ್ತಮುಗೇರು -ಸಾಲೆತ್ತೂರು ಶೌರ್ಯ ಘಟಕದ ಸದಸ್ಯರು ವಲಯದ ಮೇಲ್ವಿಚಾರಕರಾದ ಮೋಹಿನಿಯವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ಪುರುಷೋತ್ತಮ್ರವರ ಉಪಸ್ಥಿತಿಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.



ನವೀನ್ ಕಜೆ, ಗಣೇಶ್ ಶೆಟ್ಟಿ, ಜಯಶ್ರೀ, ಪುರುಷೋತ್ತಮ್, ರಂಜಿತ್ ಪೂಜಾರಿ, ರಾಮಣ್ಣ ಮೂಲ್ಯ, ಗಣೇಶ್ ಆಚಾರ್ಯ, ನವೀನ್, ಪುರುಷೋತ್ತಮ್ ಕಜೆ, ಯಶೋಧರ ಆಚಾರ್ಯ,ಚಿನ್ನಪ್ಪ ಗೌಡ, ನರೇಶ ರಕ್ತದಾನ ಮಾಡಿ ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಾಲೆತ್ತೂರು ವಲಯಾಧ್ಯಕ್ಷರಾದ ದಿನೇಶ್ ಶೆಟ್ಟಿ ಸಾಲೆತ್ತೂರು, ಒಕ್ಕೂಟದ ಅಧ್ಯಕ್ಷರುಗಳಾದ ದಿವಾಕರ ನಾಯಕ್, ಸುಧಾಕರ್ ಸಂಯೋಜಕಿ ಕುಶಾಲ, ಒಕ್ಕೂಟದ ಉಪಾಧ್ಯಕ್ಷೆ ಸಾರಮ್ಮ, ಸೇವಾಪ್ರತಿನಿಧಿಗಳಾದ ಚಂಚಲಾಕ್ಷಿ, ಮನೋಹರಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಶೌರ್ಯ ತಂಡ ನೀಡಿದ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.








