ಜನ ಮನದ ನಾಡಿ ಮಿಡಿತ

Advertisement

ವಾಯ್ಸ್ ಆಫ್ ಆರಾಧನಾ ತಂಡದಿಂದ ಮಾನವೀಯ ಸ್ಪಂದನೆ, ದಿವಂಗತ ಶೇಖರ ಅಜೆಕಾರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ, ಮಾದರಿಯಾಗಿದೆ ಸಮಾಜ ಸೇವೆಯ ಅಧ್ಯಾಯ

ದಕ್ಷಿಣ ಕನ್ನಡ : ಸಮಾಜ ಸೇವೆಯಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡಿರುವ ವಾಯ್ಸ್ ಆಫ್ ಆರಾಧನಾ ತಂಡ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ನೀಡುವುದರ ಜೊತೆಗೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ.

ವಾಯ್ಸ್ ಆರಾಧನಾ ಸಂಸ್ಥೆ ತನ್ನ ತಂಡದ ಸದಸ್ಯರ ಸಹಕಾರದಿಂದ, ಒಂದಷ್ಟು ಹಣವನ್ನು ಪ್ರತಿ ತಿಂಗಳು ಒಟ್ಟು ಸೇರಿಸಿ,ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಅನಾರೋಗ್ಯ ಪೀಡಿತರ ನೆರವರಿಗೆ ಧಾವಿಸಿ, ಪ್ರತಿ ತಿಂಗಳು ಸಹಾಯ ಧನ ನೀಡುತ್ತಾ ಬಂದಿದ್ದು, ಸಾರ್ವಜನಿಕರ ಮುಂದೆ ಕೈಚಾಚದೆ ತನ್ನ ಸದಸ್ಯ ಬಲದ ಸಹಕಾರದೊಂದಿಗೆ ಇದುವರೆಗೆ ಸುಮಾರು 20 ಲಕ್ಷ ರೂಪಾಯಿಗೂ ಮಿಕ್ಕಿ ಅನಾರೋಗ್ಯ ಪೀಡಿತರಿಗೆ ನೀಡಿರುವುದು ಪ್ರಶಂಸನೀಯ, ಹಾಗೂ ಇವರ ಸಮಾಜ ಸೇವೆಯ ಮಾದರಿ ಅನುಕರಣೀಯ ವಾಯ್ಸ್ ಆಫ್ ಆರಾಧನಾ ತಂಡ ಇದೀಗ ಸರ್ಕಾರಿ ಶಾಲೆಗಳಿಗೂ ಸಹಾಯದ ಯೋಜನೆಯನ್ನು ಹಾಕಿಕೊಂಡಿದ್ದು ಈಗಾಗಲೇ ಕಾರ್ಯೋನ್ಮುಖ ವಾಗಿದ್ದು, ತಂಡದ ಸದಸ್ಯರು ಸೇರಿದಂತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚಿಗೆ ನಿಧನರಾದ ಪತ್ರಕರ್ತ, ಸಮಾಜಸೇವಕ, ಶೇಖರ ಅಜೆಕಾರು ಇವರ ನಿವಾಸಕ್ಕೆ ವಾಯ್ಸ್ ಆರಾಧನಾ ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ಮತ್ತು ತಂಡ ತೆರಳಿ, ತಂಡದ ಸದಸ್ಯರಿಂದ ಸಂಗ್ರಹವಾದ ಹಣವನ್ನು ಶೇಖರ ಅಜಿಕಾರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿದ್ದು, ಇದು ವಾಯ್ಸ್ ಆಫ್ ಆರಾಧನಾ ತಂಡದ ಮಾನವೀಯ ಸಹಕಾರದ ಮಾದರಿ ಕೆಲಸ, ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ಇವರ ಮೇಲುಸ್ತುವಾರಿಯಲ್ಲಿ, ತಾಲೂಕು, ಜಿಲ್ಲೆ ,ರಾಜ್ಯ, ದೇಶ, ಸೇರಿದಂತೆ ಅಂತರರಾಷ್ಟ್ರೀಯ ಸದಸ್ಯರಿದ್ದು, ಎಲ್ಲರನ್ನೂ ಸಮಚಿತ್ತದಿಂದ, ಮೇಲು ಕೀಳೆಂಬ ಭಾವನೆ ಇಲ್ಲದೆ, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೆ, ಎಲ್ಲರೂ ಪರಸ್ಪರ ಪ್ರೀತಿಯಿಂದ ಸಂಸ್ಥೆಯ ಸದಸ್ಯರಾಗಿದ್ದು, ಇನ್ನಷ್ಟು ಸಮಾಜ ಸೇವೆ ಆರದಿರಲಿ ಬದುಕು ಸಂಸ್ಥೆಯಿಂದ ಬರಲಿ, ಇವರ ಸಮಾಜ ಸೇವೆಯು ಇತರರಿಗೆ ಮಾದರಿಯಾಗಲಿ “ಆರದಿರಲಿ ಬದುಕು” ಸಂಸ್ಥೆಯ ಜೊತೆ ಕೈ ಜೋಡಿಸೋಣ, ಶುಭ ಹಾರೈಸೋಣ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!