ದಕ್ಷಿಣ ಕನ್ನಡ : ಸಮಾಜ ಸೇವೆಯಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡಿರುವ ವಾಯ್ಸ್ ಆಫ್ ಆರಾಧನಾ ತಂಡ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ನೀಡುವುದರ ಜೊತೆಗೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ.
ವಾಯ್ಸ್ ಆರಾಧನಾ ಸಂಸ್ಥೆ ತನ್ನ ತಂಡದ ಸದಸ್ಯರ ಸಹಕಾರದಿಂದ, ಒಂದಷ್ಟು ಹಣವನ್ನು ಪ್ರತಿ ತಿಂಗಳು ಒಟ್ಟು ಸೇರಿಸಿ,ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಅನಾರೋಗ್ಯ ಪೀಡಿತರ ನೆರವರಿಗೆ ಧಾವಿಸಿ, ಪ್ರತಿ ತಿಂಗಳು ಸಹಾಯ ಧನ ನೀಡುತ್ತಾ ಬಂದಿದ್ದು, ಸಾರ್ವಜನಿಕರ ಮುಂದೆ ಕೈಚಾಚದೆ ತನ್ನ ಸದಸ್ಯ ಬಲದ ಸಹಕಾರದೊಂದಿಗೆ ಇದುವರೆಗೆ ಸುಮಾರು 20 ಲಕ್ಷ ರೂಪಾಯಿಗೂ ಮಿಕ್ಕಿ ಅನಾರೋಗ್ಯ ಪೀಡಿತರಿಗೆ ನೀಡಿರುವುದು ಪ್ರಶಂಸನೀಯ, ಹಾಗೂ ಇವರ ಸಮಾಜ ಸೇವೆಯ ಮಾದರಿ ಅನುಕರಣೀಯ ವಾಯ್ಸ್ ಆಫ್ ಆರಾಧನಾ ತಂಡ ಇದೀಗ ಸರ್ಕಾರಿ ಶಾಲೆಗಳಿಗೂ ಸಹಾಯದ ಯೋಜನೆಯನ್ನು ಹಾಕಿಕೊಂಡಿದ್ದು ಈಗಾಗಲೇ ಕಾರ್ಯೋನ್ಮುಖ ವಾಗಿದ್ದು, ತಂಡದ ಸದಸ್ಯರು ಸೇರಿದಂತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಇತ್ತೀಚಿಗೆ ನಿಧನರಾದ ಪತ್ರಕರ್ತ, ಸಮಾಜಸೇವಕ, ಶೇಖರ ಅಜೆಕಾರು ಇವರ ನಿವಾಸಕ್ಕೆ ವಾಯ್ಸ್ ಆರಾಧನಾ ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ಮತ್ತು ತಂಡ ತೆರಳಿ, ತಂಡದ ಸದಸ್ಯರಿಂದ ಸಂಗ್ರಹವಾದ ಹಣವನ್ನು ಶೇಖರ ಅಜಿಕಾರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿದ್ದು, ಇದು ವಾಯ್ಸ್ ಆಫ್ ಆರಾಧನಾ ತಂಡದ ಮಾನವೀಯ ಸಹಕಾರದ ಮಾದರಿ ಕೆಲಸ, ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ಇವರ ಮೇಲುಸ್ತುವಾರಿಯಲ್ಲಿ, ತಾಲೂಕು, ಜಿಲ್ಲೆ ,ರಾಜ್ಯ, ದೇಶ, ಸೇರಿದಂತೆ ಅಂತರರಾಷ್ಟ್ರೀಯ ಸದಸ್ಯರಿದ್ದು, ಎಲ್ಲರನ್ನೂ ಸಮಚಿತ್ತದಿಂದ, ಮೇಲು ಕೀಳೆಂಬ ಭಾವನೆ ಇಲ್ಲದೆ, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೆ, ಎಲ್ಲರೂ ಪರಸ್ಪರ ಪ್ರೀತಿಯಿಂದ ಸಂಸ್ಥೆಯ ಸದಸ್ಯರಾಗಿದ್ದು, ಇನ್ನಷ್ಟು ಸಮಾಜ ಸೇವೆ ಆರದಿರಲಿ ಬದುಕು ಸಂಸ್ಥೆಯಿಂದ ಬರಲಿ, ಇವರ ಸಮಾಜ ಸೇವೆಯು ಇತರರಿಗೆ ಮಾದರಿಯಾಗಲಿ “ಆರದಿರಲಿ ಬದುಕು” ಸಂಸ್ಥೆಯ ಜೊತೆ ಕೈ ಜೋಡಿಸೋಣ, ಶುಭ ಹಾರೈಸೋಣ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…