ಜನ ಮನದ ನಾಡಿ ಮಿಡಿತ

Advertisement

ಪರ್ಯಾಯ ಮಹೋತ್ಸವ ಹತ್ತಿರ ಬಂದ್ರೂ ರಸ್ತೆಗಿಲ್ಲ ಡಾಂಬರು ಭಾಗ್ಯ..!

ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಆದ್ರೆ ರಸ್ತೆ ರಿಪೇರಿ ಕಾರ್ಯ ಇನ್ನೂ ನಡೆಯದಿರುವುದು ಒಂದು ಕಡೆ ಬೇಸರಕ್ಕೆ ಕಾರಣವಾದರೆ ಇನ್ನೊಂದೆಡೆ ವಾಹನ ಸವಾರರು ಹೊಂಡಾಗುಂಡಿಗಳ ರಸ್ತೆಯಿಂದ ಬೇಸತ್ತು ಹೋಗಿದ್ದಾರೆ.

ಉಡುಪಿ ನಗರ ಭಾಗದ ರಸ್ತೆಯ ಅವ್ಯವಸ್ಥೆ ಇದು. ರಸ್ತೆ ಮಧ್ಯೆ ಹೊಂಡಾಗುಂಡಿ ಬಿದ್ದು ದ್ವಿಚಕ್ರ ವಾಹನ ಸವಾರರು ಕೈಕಾಲು ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಉಡುಪಿಯ ಬೀಡಿನ ಗುಡ್ಡೆಯ ಬಳಿಯ ರಸ್ತೆ ಮಧ್ಯೆ ಅನೇಕ ಬೃಹತ್ ಗಾತ್ರ ಹೊಂಡ ಬಿದ್ದಿದ್ದು, ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ. ಇನ್ನು ಚಿಟ್ಟಾಡಿಯಿಂದ ಹನುಮಾನ ಗ್ಯಾರೇಜ್ ಗೆ ಸಾಗುವ ರಸ್ತೆಯ ಅವ್ಯವಸ್ಥೆಯಂತೂ ಹೇಳ ತೀರದು ಇಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಇದರ ಮರು ಡಾಂಬರೀಕರಣ ಮಾಡದೇ ಹಾಗೇ ಬಿಟ್ಟ ಪರಿಣಾಮ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ.
ಪರ್ಯಾಯ ಮಹೋತ್ಸವ ಎದುರಾದಾಗ ಕನಿಷ್ಟ ರಸ್ತೆಗಳು ಡಾಂಬರೀಕರಣಗೊಳ್ಳುತ್ತದೆ.ಆದ್ರೆ ಈ ಬಾರಿ ಎಲ್ಲಾ ಕಡೆಯ ರಸ್ತೆಗೆ ಈ ಭಾಗ್ಯ ಉಂಟಾ ಗೊತ್ತಿಲ್ಲ ಆದ್ರೆ ಅತೀ ಅಗತ್ಯವಾಗಿ ಆಗಬೇಕಾದ ಕಡೆ ಡಾಂಬರೀಕರಣ ಮಾಡಿ ಎಂಬುದು ಜನ ಸಮಾನ್ಯರ ಒತ್ತಾಯವಾಗಿದೆ. ನಗರಸಭೆಯಿಂದ ಐದು ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣಕ್ಕಾಗಿ ಈಗಾಗಲೇ ಕೆಲಸ ಆರಂಭವಾಗಿದ್ದು ಆದಷ್ಟು ಬೇಗ ನಗರದ ಎಲ್ಲಾ ರಸ್ತೆಗಳಿಗೂ ಡಾಂಬರು ಭಾಗ್ಯ ಸಿಗಲಿ ಎಂಬುದು ಜನ ಸಾಮಾನ್ಯರ ಆಶಯವಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!