ಜನ ಮನದ ನಾಡಿ ಮಿಡಿತ

Advertisement

ಗಮಕ ಸಪ್ತಾಹದಲ್ಲಿ , ಪಂಚ ಮಹಾ ಕಾವ್ಯ ಕರ್ತೃ ಮಂಗಳೂರಿನ ಡಾ. ಬಂದಗದ್ದೆ ನಾಗರಾಜ ಇವರಿಗೆ ಗೌರವ ಸನ್ಮಾನ, ಆಸಕ್ತರಿಗಿದು ಆಮಂತ್ರಣ

ದಕ್ಷಿಣ ಕನ್ನಡ : ಗಮಕ ಕಲಾ ಪರಿಷತ್ತು, ಗಮಕ ಭವನ, ಗಮಕ ಗ್ರಾಮ,ಹೊಸಹಳ್ಳಿ ಶಿವಮೊಗ್ಗ ತಾಲೂಕ್ ಇದರ ವಾರ್ಷಿಕ ಗಮಕ ಸಪ್ತಾಹ ಕಾರ್ಯಕ್ರಮ ದಿನಾಂಕ 8 ಜನವರಿ 2024 ರಿಂದ 14 ಜನವರಿ 2024 ವರೆಗೆ ಪದ್ಮಶ್ರೀ ಎಚ್ ಆರ್ ಕೇಶವಮೂರ್ತಿ ವೇದಿಕೆ,ಗಮಕ ಭವನ, ಹೊಸಹಳ್ಳಿ, ಶಿವಮೊಗ್ಗ ತಾಲೂಕು ಇಲ್ಲಿ ಆಯೋಜಿಸಲಾಗಿದೆ ಎಂದು ಗಮಕ ಕಲಾ ಪರಿಷತ್ತು ಅಧ್ಯಕ್ಷ ಎಚ್ ಎಸ್ ಸತ್ಯನಾರಾಯಣ ಆಮಂತ್ರಣ ಪತ್ರದಲ್ಲಿ ತಿಳಿಸಿದ್ದಾರೆ.


ದಿನಾಂಕ 8ರಂದು ಸಂಜೆ 6 ಗಂಟೆಗೆ ಗಮಕ ಸಪ್ತಾಹ ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಶಿವಮೊಗ್ಗ ಇಲ್ಲಿನ ಪ್ರಾಂಶುಪಾಲರಾದ ಚಿದಾನಂದ ಎನ್ ಕೆ ಇವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಮಕಲಾ ಪರಿಷತ್ತು ಹೊಸಹಳ್ಳಿ ಇದರ ಅಧ್ಯಕ್ಷರಾದ ಎಚ್ ಎಸ ಸತ್ಯನಾರಾಯಣ ವಹಿಸಿಕೊಳ್ಳಲಿದ್ದು ಸಪ್ತಾಹದ ಪ್ರತಿದಿನ ಸಂಜೆ 6:45 ರಿಂದ 8:45 ಗಂಟೆವರೆಗೆ ಗಮಕವಾಚನ ವ್ಯಾಖ್ಯಾನ ನಡೆಯಲಿದ್ದು, ದಿನಾಂಕ 10 ರಂದು ಬೆಳಗ್ಗೆ 10 ಗಂಟೆಗೆ ಗುರುನಮನ ಕಾರ್ಯಕ್ರಮವು ಜರುಗಲಿದೆ.


ಗಮಕ ಸಪ್ತಾಹದ ಕಾರ್ಯಕ್ರಮದಲ್ಲಿ ದಿನಾಂಕ 14 ಜನವರಿ 2024 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮವಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇದರ ಸಹಾಯಕ ನಿರ್ದೇಶಕರಾದ ಹೆಚ್ ಉಮೇಶ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ, ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಎ ವಿ ಪ್ರಸನ್ನ ವಹಿಸಿಕೊಳ್ಳಲಿದ್ದು, ಸಮಾರೋಪ ನುಡಿಗಳನ್ನು ಕರ್ನಾಟಕ ಸಂಘ ಶಿವಮೊಗ್ಗ ಇದರ ಅಧ್ಯಕ್ಷರಾದ ಎಂ ಎನ್ ಸುಂದರ್ ರಾಜ್ ಮಾಡಲಿದ್ದಾರೆ, ಸಂಜೆ 7:30 ಗಂಟೆಗೆ
ಪಂಚ ಮಹಾ ಕಾವ್ಯಗಳ ಕರ್ತೃ, ಪ್ರಸ್ತುತ ಮಂಗಳೂರು ನಿವಾಸಿ ಡಾಕ್ಟರ್ ಬಂದಗದ್ದೆ ನಾಗರಾಜ ಇವರ ಸನ್ಮಾನ ಕಾರ್ಯಕ್ರಮವಿದ್ದು, ಗಮಕ ಆಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!