ಮುಲ್ಕಿ: ಹಳೆಯಂಗಡಿಯ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ಯ ಆಶ್ರಯದಲ್ಲಿ ಸಂಘದ ಸಭಾ ಭವನದಲ್ಲಿ ಸಂಘದ ಪ್ರೇರಣಾಶಕ್ತಿ, ಸಹಕಾರಿ ರಂಗದ ಸಾಧಕ ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಸ್ಮರಣಾ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸಾಹಿತಿ ಮತ್ತು ಸಮಾಜ ಸೇವಕಿ,ಹಳೆಯಂಗಡಿಯ ಎಚ್. ಶಕುಂತಲಾ ಭಟ್ ಮಾತನಾಡಿ ದಿ. ಶಾಂತಾರಾಮ ಶೆಟ್ಟರು ಪಕ್ಷಿಕೆರೆ ಯಂತಹ ಕುಗ್ರಾಮದಲ್ಲಿ ಶಾಲೆ ತೆರೆದು ಸಾವಿರಾರು ಬಡ ಮಕ್ಕಳ ಶಿಕ್ಷಣಕ್ಕೆ ವಿದ್ಯಾದಾನದ ಮೂಲಕ ನೆರವಾಗಿದ್ದರು.. ಪ್ರತಿಯೊಂದು ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ವಹಿಸಿ ಮಾತನಾಡಿ ಸಂಘದ ಪ್ರೇರಣಾ ಶಕ್ತಿ ಪಂಜದಗತ್ತು ಶಾಂತರಾಮ ಶೆಟ್ಟರು ಸಹಕಾರಿ ಸಂಘದ ಭೀಷ್ಮರಾಗಿದ್ದರು. ಅವರ ಆದರ್ಶಗಳು ಸೊಸೈಟಿಗೆ ಮಾದರಿಯಾಗಿದ್ದು ಸಾಮಾಜಿಕ, ಶೈಕ್ಷಣಿಕ ,ಧಾರ್ಮಿಕ, ರಂಗಕ್ಕೆ ಅವರ ಕೊಡುಗೆ ಅನನ್ಯ ಅವರ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು.
ಗ್ರಾಹಕರ ಬೆಂಬಲದಿಂದ ಶೀಘ್ರದಲ್ಲಿ ಕಿನ್ನಿಗೋಳಿಯಲ್ಲಿ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿಯ ಇನ್ನೊಂದು ಶಾಖೆ ಪ್ರಾರಂಭಿಸಲಾಗುವುದು
ಎಂದರು. ವೇದಿಕೆಯಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ,ಸವಿತಾ ಶಾಂತಾರಾಮ ಶೆಟ್ಟಿ,
ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.



