ಕಡಬ: ಅರಣ್ಯ ಇಲಾಖೆಯ ನೂಜಿಬಾಳ್ತಿಲ ಗಸ್ತಿನಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಕೆ. ಅವರು ಉಪ ವಲಯ ಅರಣ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದು, ಪಂಜ ವಲಯದ ಐ.ಟಿ.ಸಿ. ಅರಣ್ಯ ಕಛೇರಿ ಘಟಕಕ್ಕೆ ವರ್ಗಾವಣೆಗೊಂಡಿದ್ದಾರೆ.

ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಹಾಗೂ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಸ್ಟಾರ್ ಪದಕವನ್ನು ನೀಡಿ ಅಧಿಕಾರ ವಹಿಸಿದರು. ಸುಬ್ರಹ್ಮಣ್ಯ ಕೆ. ಅವರು ಕಡಬ ಸಮೀಪದ ಕಳಾರ ನಿವಾಸಿಯಾಗಿದ್ದು, ಪತ್ನಿ ಉಷಾ, ಮಕ್ಕಳೊಂದಿಗೆ ಕಳಾರದಲ್ಲಿ ವಾಸ್ತವ್ಯದಲ್ಲಿದ್ದಾರೆ.



