ಮುಲ್ಕಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸೌತ್ ಕೆನರಾ ಫೋಟೋಗ್ರಾಫರ್ ಎಸೋಸಿಯೇಷನ್ ಮುಲ್ಕಿ ವಲಯದ ವತಿಯಿಂದ ಮುಲ್ಕಿ ಸೀಮೆ ಅರಸು ಕಂಬಳ ವೈಭವ 2023 ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ಸೀಮೆಯ ಅರಮನೆಯಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಛಾಯಾಚಿತ್ರ ಪ್ರದರ್ಶನದ ಮೂಲಕ ಗ್ರಾಮೀಣ ಕ್ರೀಡೆಯಾದ ಕಂಬಳಕ್ಕೆ ಪ್ರೋತ್ಸಾಹಿಸಿದ ಎಸ್ಕೆಪಿಎ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಎಸ್ಕೆಪಿಎ ದ.ಕ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿ, ದಯಾನಂದ ಬಂಟ್ವಾಳ, ಮುಲ್ಕಿ ವಲಯದ ಅಧ್ಯಕ್ಷ ಪ್ರಕಾಶ್ ಸುವರ್ಣ , ಕಾರ್ಯದರ್ಶಿ ಯೋಗೀಶ್ ಪಾವಂಜೆ,ಜಿಲ್ಲಾ ಉಪ ಕಾರ್ಯದರ್ಶಿ ಹರೀಶ್ ಪಡುಪಣಂಬೂರು, ಮುಲ್ಕಿ ವಲಯ ಕಟ್ಟಡ ಸಮಿತಿ ಸದಸ್ಯ ನವೀನ್ ಚಂದ್ರ, ಎಸ್ ಕೆ ಪಿ ಎನ ಮೋಹನ್ ರಾವ್, ಜೀವನ್ ಪ್ರಕಾಶ್ಕಾಮೆ ರೊಟ್ಟು ಗೌತಮ್ ಜೈನ್ ಮುಲ್ಕಿ ಅರಮನೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರ ವಿವರ-ರಮಾನಂದ ಪೈ ಮಂಗಳೂರು (ಪ್ರ), ರವಿ ಕೋಟ್ಯಾನ್ ಮೂಡಬಿದ್ರೆ (ದ್ವಿ), ಸಾಗರ್ ದೇವಾಡಿಗ ಮಂಗಳೂರು (ತೃ)



