ದಕ್ಷಿಣ ಕನ್ನಡ : ದೇಶದಾದ್ಯಂತ ಅಡಿಕೆ ಖರೀದಿ ಮತ್ತು ಮಾರಾಟ ಕೇಂದ್ರಗಳನ್ನ ಹೊಂದಿರುವ ಕ್ಯಾಂಪ್ಕೋ ಸಂಸ್ಥೆ,, 1973ರಲ್ಲಿ ಆರಂಭಗೊಂಡು ರೈತರಿಂದ ಅಡಿಕೆ ಖರೀದಿ ಮತ್ತು ಮಾರಾಟವನ್ನು ಹಾಗೂ ಇತರ ರೈತೋದ್ಪನ್ನಗಳನ್ನು ಖರೀದಿಸಿ ರೈತರಿಗೆ ನೆರವಾಗುವುದರ ಜೊತೆಗೆ ಮಾರುಕಟ್ಟೆ ಸ್ಥಿರದರ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಅಲ್ಲದೆ ಅಡಿಕೆ ಹಾಗೂ ಕರಿಮೆಣಸು ಕೊಳೆ ರೋಗದಿಂದ ರಕ್ಷಿಸಲು ರೈತರಿಗೆ ಬೇಕಾದ ಬೋರ್ಡು ದ್ರಾವಣ ತಯಾರಿಕೆಗೆ ಬೇಕಾದ ಮೂಲ ಸಾಮಗ್ರಿಗಳನ್ನು ದರ ಕಡಿತ ಮಾರಾಟದೊಂದಿಗೆ ನೀಡಿ ಸಹಕಾರಿಯಾಗಿರುವುದು, ಹಾಗೂ ಕೊಕ್ಕೋದಿಂದ ತಯಾರಾಗುವ ಚಾಕಲೇಟ್ ಹಾಗೂ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ ರೈತರಿಗೆ ಸಹಕಾರಿಯಾಗಿರುವುದು ನಮಗೆಲ್ಲ ತಿಳಿದೇ ಇದೆ.
ಪ್ರಸ್ತುತ ಕ್ಯಾಂಪ್ಕೋ ಸಂಸ್ಥೆಯು ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಪ್ರಮುಖವಾಗಿದ್ದು ರೈತರ ಆರೋಗ್ಯನಿಧಿ ಎಂಬ ಕಾರ್ಯಕ್ರಮದಡಿ ಕ್ಯಾಮ್ಕೋದ ಚಿತ್ತ ರೈತರ ಆರೋಗ್ಯದತ್ತ ಯೋಜನೆ ಅಡಿಯಲ್ಲಿ ಮೂಡುಬಿದರೆ ಕ್ಯಾಂಪ್ಕೋ ಸದಸ್ಯರಾದ ಇಗ್ನೇಷಿಯಸ್ ಸೇರವೋ ಕಲ್ಲ ಮುನ್ಕೂರು ಇವರಿಗೆ ಆರೋಗ್ಯ ಸಂಬಂಧಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗಾಗಿ ರೂಪಾಯಿ 50 ಸಾವಿರವನ್ನು ಸಂಸ್ಥೆಯು ಬೈಕಂಪಾಡಿ ವಲಯದ ಹಿರಿಯ ಅಧಿಕಾರಿಯದ ಚಂದ್ರ ಇವರ ಮುಖಾಂತರ ಇಗ್ನೇಶಿಯಸ್ ಸೆರಾವೋ ಇವರ ಮನೆಯಲ್ಲಿ ಮೂಡುಬಿದ್ರೆ ವಲಯ ಕ್ಯಾಮ್ಕೋ ಪ್ರಬಂಧಕರಾದ ಶ್ರೀನಿವಾಸ್ ಪಿ.ವಿ. ಮತ್ತಿತರರ ಉಪಸ್ಥಿತಿಯಲ್ಲಿ ಚೆಕ್ ಮುಖಾಂತರ ನೀಡಿದರು.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…