ಕರಾವಳಿ

ಪುಟಾಣಿ ಬಾಲರಾಮರನ್ನು ಕಾಣುವುದೇ ಮನಸ್ಸಿಗೆ ಆನಂದ

ಮಂಗಳೂರು:ಅಯೋಧ್ಯೆಯ ರಾಮ ಮಂದಿರ ಹಿಂದು ಬಾಂಧವರ ಸಾವಿರಾರು ವರ್ಷಗಳ ಕನಸೆಂದರೆ ತಪ್ಪಾಗಲಾರದು. ಆ ಕನಸೊಂದು ಇದೀಗ ನನಸಾಗಿದೆ.1528ರಲ್ಲಿ ಮೊಘಲರು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ತದ ನಂತರದ ದಿನಗಳಲ್ಲಿ ಹಲವಾರು ವಿವಾದಗಳು ನಡೆದವು. ಈ ವಿವಾದಗಳ ನಡುವೆ 1992 ರಲ್ಲಿ ಕರಸೇವಕರ ಗುಂಪೊಂದು ಮಸೀದಿಯನ್ನು ಧ್ವಂಸಗೊಳಿಸಿದವು.


ಮುಂದಿನ ಅವಧಿಯಲ್ಲಿ ಭಾರತದ ನೆಲದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಕಾಲ ಗಲಭೆಗಳು ನಡೆದು ಹಲವಾರು ರಾಮಭಕ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ದಿನಗಳಾವು.ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿಯೋ ಏನೋ 2019 ನವಂಬರ್ 9 ರಂದು ಸುಪ್ರೀಂ ಕೋರ್ಟ್ ವಿವಾದಿತ ರಾಮ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಲು ನಿರ್ಧರಿಸಿತು. ಈ ನಿರ್ಧಾರದನ್ವಯ 2020 ಫೆಬ್ರವರಿ 5 ರಂದು ಈ ಪ್ರದೇಶದಲ್ಲಿ ರಾಮಮಂದಿರವನ್ನು ಕಟ್ಟುವ ಕಾರ್ಯಕ್ಕೆ ತೀರ್ಪು ನೀಡಿತು. ಅದರಂತೆ ಸಾವಿರಾರು ವರ್ಷಗಳ ಕನಸಿನ ರಾಮಮಂದಿರ ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ. ಇದರ ಸಂಭ್ರಮವವು ನಾಡಿನ ಎಲ್ಲೆಡೆ ಮನೆ ಮಾತಾಗಿಸಿದೆ ನಾಡಿನ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತೆ ಮಾಡಿದ ಸುಂದರ ಕ್ಷಣ.


ಈ ನೆನಪಿನ ದಿನವನ್ನು ಪೋಷಕರು, ರಾಮಭಕ್ತರು ತಮ್ಮ ಮಕ್ಕಳಿಗೆ ರಾಮ-ಲಕ್ಷ್ಮಣ, ಸೀತೆ, ಹನುಮಂತರ ವೇಷಭೂಷಣವನ್ನು ಧರಿಸಿ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ತನ್ನ ಅಯೋಧ್ಯೆಯಲ್ಲಿ ಹೇಗೆ ಕಂಗೊಳಿಸುತ್ತಿರುವನೆಂಬ ಊಹೆಯನ್ನು ಮಾಡಿಕೊಂಡು ಅದರಂತೆ ತಮ್ಮ ಮಕ್ಕಳನ್ನು ಸಿದ್ದ ಗೊಳಿಸಿ ಮನೆಯಲ್ಲೇ ರಾಮನನ್ನು ಕಂಡು ಸಂತೋಷ ಪಟ್ಟಿದ್ದಾರೆ.


ಎಲ್ಲಿ ನೋಡಿದರೂ ಪ್ರಭು ಶ್ರೀರಾಮ-ಲಕ್ಷ್ಮಣ, ಸೀತೆ, ಹನುಮಂತರನ್ನು ಹೋಲುವ ಮಕ್ಕಳ ಮುದ್ದಾದ ಭಾವಚಿತ್ರಗಳನ್ನು ಕಾಣುವುದೇ ಕಣ್ಣಿಗೆ ಹಬ್ಬ. ಹೀಗೆ ನಾಡಿನಾದ್ಯಂತ ಎಲ್ಲಾ ರಾಮಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಅಯೋಧ್ಯೆಯ ಶ್ರೀರಾಮಚಂದ್ರನನ್ನು ಕಂಡು ಭಾವುಕರಾಗಿ ತಾವುಗಳೆ ಧನ್ಯೋಸ್ಮಿಗಳೆಂದುಕೊಳ್ಳುತ್ತಿದ್ದಾರೆ. ಈ ದಿನವನ್ನು ದೀಪಾವಳಿ ಹಬ್ಬದ ದಿನದಂತೆ ಮನೆಯಂಗಳದಲ್ಲಿ ದೀಪ ಹಚ್ಚಿ ಸಂಭ್ರಮಿಸಿರುವುದು ಮತ್ತೊಂದು ತರಹದ ಹಬ್ಬ. ಅಯೋಧ್ಯಾ ಶ್ರೀ ರಾಮಮಂದಿರ ಪ್ರತಿಷ್ಠಾಪನಾ ದಿನವು ನಾಡಿನಾದ್ಯಂತ ಕೋಟ್ಯಾಂತರ ಬಾಲರಾಮರ ಮೂಲಕ ಆ ಪ್ರಭು ಶ್ರೀ ರಾಮಚಂದ್ರನನ್ನೇ ನೋಡಿದಷ್ಟು ಉತ್ಸಾಹ, ಸಂತೋಷ ಆನಂದವನ್ನುಂಟು ಮಾಡಿದೆ. ಸಾವಿರಾರು ವರ್ಷಗಳ ಹಿಂದು ಬಾಂಧವರ ಕನಸಿನ ರಾಮಮಂದಿರವನ್ನು ಕಡೆಗೂ ಕಟ್ಟಿಯೇ ಬಿಟ್ಟೆವು ಎಂಬ ಗರ್ವ ರಾಮಭಕ್ತರಲ್ಲಿ , ರಾಮನಲ್ಲಿರುವ ಭಕ್ತಿಯನ್ನು ದೃಡಗೊಳಿಸಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…

9 hours ago

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…

9 hours ago

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…

10 hours ago

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…

7 days ago

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…

7 days ago

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…

7 days ago