ಕರಾವಳಿ

ಪುಟಾಣಿ ಬಾಲರಾಮರನ್ನು ಕಾಣುವುದೇ ಮನಸ್ಸಿಗೆ ಆನಂದ

ಮಂಗಳೂರು:ಅಯೋಧ್ಯೆಯ ರಾಮ ಮಂದಿರ ಹಿಂದು ಬಾಂಧವರ ಸಾವಿರಾರು ವರ್ಷಗಳ ಕನಸೆಂದರೆ ತಪ್ಪಾಗಲಾರದು. ಆ ಕನಸೊಂದು ಇದೀಗ ನನಸಾಗಿದೆ.1528ರಲ್ಲಿ ಮೊಘಲರು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ತದ ನಂತರದ ದಿನಗಳಲ್ಲಿ ಹಲವಾರು ವಿವಾದಗಳು ನಡೆದವು. ಈ ವಿವಾದಗಳ ನಡುವೆ 1992 ರಲ್ಲಿ ಕರಸೇವಕರ ಗುಂಪೊಂದು ಮಸೀದಿಯನ್ನು ಧ್ವಂಸಗೊಳಿಸಿದವು.


ಮುಂದಿನ ಅವಧಿಯಲ್ಲಿ ಭಾರತದ ನೆಲದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಕಾಲ ಗಲಭೆಗಳು ನಡೆದು ಹಲವಾರು ರಾಮಭಕ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ದಿನಗಳಾವು.ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿಯೋ ಏನೋ 2019 ನವಂಬರ್ 9 ರಂದು ಸುಪ್ರೀಂ ಕೋರ್ಟ್ ವಿವಾದಿತ ರಾಮ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಲು ನಿರ್ಧರಿಸಿತು. ಈ ನಿರ್ಧಾರದನ್ವಯ 2020 ಫೆಬ್ರವರಿ 5 ರಂದು ಈ ಪ್ರದೇಶದಲ್ಲಿ ರಾಮಮಂದಿರವನ್ನು ಕಟ್ಟುವ ಕಾರ್ಯಕ್ಕೆ ತೀರ್ಪು ನೀಡಿತು. ಅದರಂತೆ ಸಾವಿರಾರು ವರ್ಷಗಳ ಕನಸಿನ ರಾಮಮಂದಿರ ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ. ಇದರ ಸಂಭ್ರಮವವು ನಾಡಿನ ಎಲ್ಲೆಡೆ ಮನೆ ಮಾತಾಗಿಸಿದೆ ನಾಡಿನ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತೆ ಮಾಡಿದ ಸುಂದರ ಕ್ಷಣ.


ಈ ನೆನಪಿನ ದಿನವನ್ನು ಪೋಷಕರು, ರಾಮಭಕ್ತರು ತಮ್ಮ ಮಕ್ಕಳಿಗೆ ರಾಮ-ಲಕ್ಷ್ಮಣ, ಸೀತೆ, ಹನುಮಂತರ ವೇಷಭೂಷಣವನ್ನು ಧರಿಸಿ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ತನ್ನ ಅಯೋಧ್ಯೆಯಲ್ಲಿ ಹೇಗೆ ಕಂಗೊಳಿಸುತ್ತಿರುವನೆಂಬ ಊಹೆಯನ್ನು ಮಾಡಿಕೊಂಡು ಅದರಂತೆ ತಮ್ಮ ಮಕ್ಕಳನ್ನು ಸಿದ್ದ ಗೊಳಿಸಿ ಮನೆಯಲ್ಲೇ ರಾಮನನ್ನು ಕಂಡು ಸಂತೋಷ ಪಟ್ಟಿದ್ದಾರೆ.


ಎಲ್ಲಿ ನೋಡಿದರೂ ಪ್ರಭು ಶ್ರೀರಾಮ-ಲಕ್ಷ್ಮಣ, ಸೀತೆ, ಹನುಮಂತರನ್ನು ಹೋಲುವ ಮಕ್ಕಳ ಮುದ್ದಾದ ಭಾವಚಿತ್ರಗಳನ್ನು ಕಾಣುವುದೇ ಕಣ್ಣಿಗೆ ಹಬ್ಬ. ಹೀಗೆ ನಾಡಿನಾದ್ಯಂತ ಎಲ್ಲಾ ರಾಮಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಅಯೋಧ್ಯೆಯ ಶ್ರೀರಾಮಚಂದ್ರನನ್ನು ಕಂಡು ಭಾವುಕರಾಗಿ ತಾವುಗಳೆ ಧನ್ಯೋಸ್ಮಿಗಳೆಂದುಕೊಳ್ಳುತ್ತಿದ್ದಾರೆ. ಈ ದಿನವನ್ನು ದೀಪಾವಳಿ ಹಬ್ಬದ ದಿನದಂತೆ ಮನೆಯಂಗಳದಲ್ಲಿ ದೀಪ ಹಚ್ಚಿ ಸಂಭ್ರಮಿಸಿರುವುದು ಮತ್ತೊಂದು ತರಹದ ಹಬ್ಬ. ಅಯೋಧ್ಯಾ ಶ್ರೀ ರಾಮಮಂದಿರ ಪ್ರತಿಷ್ಠಾಪನಾ ದಿನವು ನಾಡಿನಾದ್ಯಂತ ಕೋಟ್ಯಾಂತರ ಬಾಲರಾಮರ ಮೂಲಕ ಆ ಪ್ರಭು ಶ್ರೀ ರಾಮಚಂದ್ರನನ್ನೇ ನೋಡಿದಷ್ಟು ಉತ್ಸಾಹ, ಸಂತೋಷ ಆನಂದವನ್ನುಂಟು ಮಾಡಿದೆ. ಸಾವಿರಾರು ವರ್ಷಗಳ ಹಿಂದು ಬಾಂಧವರ ಕನಸಿನ ರಾಮಮಂದಿರವನ್ನು ಕಡೆಗೂ ಕಟ್ಟಿಯೇ ಬಿಟ್ಟೆವು ಎಂಬ ಗರ್ವ ರಾಮಭಕ್ತರಲ್ಲಿ , ರಾಮನಲ್ಲಿರುವ ಭಕ್ತಿಯನ್ನು ದೃಡಗೊಳಿಸಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…

2 days ago

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…

2 days ago

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…

3 days ago

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…

3 days ago

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…

3 days ago

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…

3 days ago