ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಮೋಂಟಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಅಭಿಷೇಕ್ ನಡು ತೋಟ ಅವರ ಮಾಲಕತ್ವದ ಮಯೂರ ಕನ್ಸಲ್ಟೆನ್ಸಿ ಹಾಗೂ ಕನ್ಸ್ಟ್ರಕ್ಷನ್ಸ್ ಕಚೇರಿ ಶುಭ ಆರಂಭಗೊಂಡಿತು.

ನಡು ತೋಟ ಕುಟುಂಬದ ಹಿರಿಯರು ನಿವೃತ್ತ ಉಪನ್ಯಾಸಕರಾದ ನೀಲಪ್ಪಗೌಡ ನಡುತೋಟ ಟೇಪ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.ಹಾಗೂ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಡಾ lರವಿ ಕಕ್ಕೆ ಪದವು ಅವರು ದೀಪ ಬೆಳಗಿಸುವುದರ ಮೂಲಕ ಕಚೇರಿ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಶ್ವನಾಥ ನಡುತೋಟ ,ಗಿರಿಧರ ನಡುತೋಟ, ವಿಜಯಕುಮಾರ ನಡುತೋಟ, ಶ್ರೀಮತಿ ಶಾಂತಿ ,ಸುಮತಿ, ಲೀಲಾ,ಅನಿತಾ, ಗೀತಾ , ಕಾರ್ತಿಕ್ ನಡುತೋಟ ಮತ್ತಿತರರು ಉಪಸ್ಥಿತರಿದ್ದರು.



