ಹುಣಸೂರು: ಈಶಾನ್ಯ ಆಪ್ರೀಕಾದ ಸೂಡಾನ್ ದೇಶಕ್ಕೆ ವ್ಯಾಪಾರಕ್ಕಾಗಿ ತೆರಳಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ ಅಲೆಮಾರಿ ಜನಾಂಗದ (ಹಕ್ಕಿಪಿಕ್ಕಿ) ನಂದಿನಿ ಯವರ ಪಾರ್ಥಿವ ಶರೀರ ಸ್ವಗ್ರಾಮ ಪಕ್ಷಿರಾಜಪುರಕ್ಕೆ ತಲುಪಿತು.

ಮೃತರ ಪಾರ್ಥಿವ ಶರೀರವನ್ನು ತಮ್ಮ ತಾಯ್ನಾಡಿಗೆ ತರಲು ಪಕ್ಷಿರಾಜ ಪುರದ ನಿವಾಸಿಗಳು ಏ.14ರಂದು ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರನ್ನು ಭೇಟಿ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಮನವಿ ಮಾಡಿದಕೊಂಡ ಮೇರೆಗೆ ಎಚ್ ಪಿ ಮಂಜುನಾಥ್ ರವರು ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ರಜನೀಶ್ ಗೋಯಲ್ ರವರಿಗೆ ಮಾಹಿತಿ ನೀಡಿದ್ದರು. ನಂದಿನಿಯವರ ಮೃತದೇಹವು ಸೂಡಾನ್ ದೇಶದಿಂದ ವಿಮಾನದಲ್ಲಿ ಮುಂಬೈಗೆ ಶನಿವಾರ ತಲುಪಿದ್ದು, ಮಧ್ಯಾಹ್ನ ಪಕ್ಷಿರಾಜಪುರಕ್ಕೆ ತಲುಪಿದೆ.
ಸೂಡಾನ್ ದೇಶದಿಂದ ಮೃತ ದೇಹ ತರಲು ಎಲ್ಲಾ ರೀತಿಯ ಸಹಾಯ ಹಾಗೂ ಸಹಕಾರ ನೀಡಿದ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.



