ಜನ ಮನದ ನಾಡಿ ಮಿಡಿತ

Advertisement

ವಿಟ್ಲ ಪೇಟೆಯಲ್ಲಿ ಬಿಸಿಲಿನ ತಾಪಕ್ಕೆ ಬಂತು ನೀರಿನ ಫಾಗಿಂಗ್ ಪ್ರಯೋಗ


ವಿಟ್ಲ: ಕರಾವಳಿ ಪರಿಸರದಾದ್ಯಂತ ಬಿಸಿಲಿನ ಅಬ್ಬರಕ್ಕೆ ಜನರು ಹೊರಗಡೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ವಾಹನ ಸವಾರರು ಮತ್ತು ಪಾದಾಚಾರಿಗಳು, ವ್ಯಾಪಾರಿಗಳು ಬವಣೆ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ವಿಟ್ಲದ ಎರಡು ಅಂಗಡಿಯವರು ಬಿಸಿಲಿನ ಉಷ್ಣಾಂಶವನ್ನು ತಡೆಯಲು ಅಂಗಡಿ ಮುಂಭಾಗ ನೀರಿನ ಫಾಗಿಂಗ್ ಮಾಡುವ ಮೂಲಕ ವಿಶೇಷ ಪ್ರಯೋಗ ಮಾಡಿದ್ದಾರೆ.


ವಿಟ್ಲ ನಾಲ್ಕು ಮಾರ್ಗ ರಸ್ತೆಯಲ್ಲಿರುವ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಕ ಇಸ್ಮಾಯಿಲ್, ಮತ್ತು ಮೊಬೈಲ್ ಅಂಗಡಿ ಮಾಲಕ ಖಲಂದರ್ ಅವರು ತಮ್ಮ ಅಂಗಡಿ ಮುಂಭಾಗದ ಮೇಲ್ಭಾಗದಲ್ಲಿ ನೀರಿನ ಪೈಪ್ ಅಳವಡಿಸಿ ಫಾಗಿಂಗ್ ಮಾಡಿದ್ದಾರೆ. ಇದು ಕೇವಲ ಇವರ ಅಂಗಡಿಗೆ ಬರುವ ಗ್ರಾಹಕರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಮಧ್ಯಾಹ್ನ ವೇಳೆ ಉಂಟಾಗುವ ಸುಡು ಬಿಸಿಲಿಗೆ ಹೆಚ್ಚಾಗಿ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಅಭಾವವನ್ನು ಅರಿತು ದಿನಕ್ಕೆ ವಿವಿಧ ಸಮಯಗಳಲ್ಲಿ ದಿನಕ್ಕೆ ಒಂದು ಗಂಟೆ ಫಾಗಿಂಗ್ ಮಾಡಲಾಗುತ್ತಿದ್ದು, ಸುಡು ಬಿಸಿಲಿಗೆ ಫಾಗಿಂಗ್ ಆಗುವಾಗ ಜನರಿಗೆ ತಂಪೆರೆಯುತ್ತದೆ. ಒಂದು ಗಂಟೆ ಫಾಗಿಂಗ್ ಮಾಡಲು ೨೦ ಲೀಟರ್ ನೀರು ಬೇಕಾಗುತ್ತದೆ. ಇದು ಅಳವಡಿಸಿದ್ದರಿಂದ ಅಂಗಡಿ ಒಳಗಡೆ ನಿಂತು ವ್ಯಾಪಾರ ಮಾಡಲು ಹಾಗೂ ಗ್ರಾಹಕರಿಗೆ, ರಸ್ತೆಯಲ್ಲಿ ತೆರಳುವ ಸಾರ್ವಜನಿಕರಿಗೂ ಕೂಡಾ ಇದು ಪ್ರಯೋಜವಾಗಿದೆ ಎಂದು ಅಂಗಡಿ ಮಾಲಕ ಇಸ್ಮಾಯಿಲ್ ಅವರು ಹೇಳುತ್ತಾರೆ.


ಈ ಪ್ರಯೋಗದಿಂದ ಕೇವಲ ಇವರ ಎರಡು ಅಂಗಡಿಗಳಿಗೆ ಮಾತ್ರ ಪ್ರಯೋಜನವಲ್ಲ. ರಸ್ತೆಯಲ್ಲಿ ತೆರಳುವ ಪಾದಾಚಾರಿಗಳಿಗೂ ಪ್ರಯೋಜವಾಗಿದೆ. ಇವರ ಈ ರೀತಿಯ ಪ್ರಯೋಗದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!