ವಿಶೇಷ ವರದಿ

ಕ್ಯಾಪ್ಟನ್ ಕೂಲ್ ಗೆ 42ನೇ ಹುಟ್ಟುಹಬ್ಬ!

ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ಹಾಗೂ ‘ಕ್ಯಾಪ್ಟನ್​ ಕೂಲ್’ ಎಂದೇ ಜನಪ್ರಿಯರಾಗಿರುವ ಮಹೇಂದ್ರ ಸಿಂಗ್​ ಧೋನಿ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1981ರ ಜುಲೈ 7ರಂದು ಜನಿಸಿದ ಇವರು ಯಶಸ್ವಿ ನಾಯಕ ಮಾತ್ರವಲ್ಲದೇ ಯಶಸ್ವಿ ವಿಕೆಟ್​ ಕೀಪರ್​ ಕೂಡಾ ಆಗಿರುವುದು ಗೊತ್ತಿರುವ ಸಂಗತಿ. ಹೊರತುಪಡಿಸಿದಂತೆಯೂ ಅವರ ಕುರಿತು ಸಾಕಷ್ಟು ಕುತೂಹಲದ ವಿಚಾರಗಳಿವೆ..

ನಿಮಗಿದು ಗೊತ್ತೇ?

  • ಧೋನಿ ಕ್ರಿಕೆಟ್ ವೃತ್ತಿಜೀವನ ಡಕೌಟ್‌ನೊಂದಿಗೆ ಪ್ರಾರಂಭ!
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಅತ್ಯಧಿಕ ಸ್ಕೋರ್ 224ರನ್. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ.
  • 2009 ಸೆ.30 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡಿ ಮೊದಲ ವಿಕೆಟ್​ ಪಡೆದ ಧೋನಿ.
  • ಧೋನಿ ನಾಯಕನಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ. ಒಟ್ಟು 331 ಪಂದ್ಯಗಳ ಪೈಕಿ 60 ಟೆಸ್ಟ್‌, 199 ಏಕದಿನ, 72 ಟಿ20.
  • 2011ರಲ್ಲಿ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ. 2019ರಲ್ಲಿ ಕಾಶ್ಮೀರದಲ್ಲಿ ತಮ್ಮ ಘಟಕದೊಂದಿಗೆ ಸೇವೆ ಸಲ್ಲಿಸಲು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರವಾಸ ತೊರೆದರು.
  • ಐಸಿಸಿಯ ಎಲ್ಲ 3 ಟ್ರೋಫಿಗಳನ್ನು ಜಯಿಸಿದ ವಿಶ್ವದ ಏಕೈಕ ನಾಯಕ. (ಟಿ20 ವಿಶ್ವಕಪ್ 2007, ಏಕದಿನ ವಿಶ್ವಕಪ್ 2011, ICC​​ ಚಾಂಪಿಯನ್​ ಟ್ರೋಫಿ 2013)​
  • ವಿಕೆಟ್​ ಕೀಪರ್​ ಆಗಿ ಅತಿ ಹೆಚ್ಚು ಸ್ಕೋರ್​ ( ಶ್ರೀಲಂಕಾ ವಿರುದ್ಧ 183ರನ್) ಗಳಿಸಿದ ಏಕೈಕ ಆಟಗಾರ. ​
  • ಯಶಸ್ವಿ ನಾಯಕನ ಹತ್ತನೇ ತರಗತಿ ಅಂಕ 66%, 12ನೇ ತರಗತಿ ಅಂಕ 56%
  • ಧೋನಿ ಶ್ರೀಮಂತ ಭಾರತೀಯ ಕ್ರಿಕೆಟರ್​. ಫೋರ್ಬ್ಸ್ ಪ್ರಕಾರ, 2021ರ ಹೊತ್ತಿಗೆ ನಿವ್ವಳ ಆಸ್ತಿ ಮೌಲ್ಯ 111 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದ್ದು, 2023ರಲ್ಲಿ 120 ಮಿಲಿಯನ್‌ (1,040 ಕೋಟಿ) ಎಂದು ಹೇಳಲಾಗಿದೆ.
  • ಧೋನಿಗೆ 2009ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ನೀಡಿ ಗೌರವಿಸಲಾಯಿತು. 2007ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವ ಪ್ರಶಸ್ತಿಯಾದ ‘ರಾಜೀವ್ ಗಾಂಧಿ ಖೇಲ್ ರತ್ನ’ ನೀಡಿ ಪುರಸ್ಕರಿಸಲಾಯಿತು.
  • ಟೈಮ್ ಮ್ಯಾಗಜೀನ್‌ನ ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಧೋನಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯಿಂದ ವಿಶ್ವದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಪಟ್ಟಿ ಮಾಡಲಾಗಿದೆ.​
  • ಎರಡು ಬಾರಿ ಐಸಿಸಿ, ODI ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದ ಏಕೈಕ ಕ್ರಿಕೆಟರ್.​
  • ಆಗಸ್ಟ್ 2020ರಲ್ಲಿ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರ. ಧೋನಿ ಕೊನೆಯ ಪಂದ್ಯ ನ್ಯೂಜಿಲೆಂಡ್ ವಿರುದ್ಧ 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿದ್ದರು.
  • ಧೋನಿ ಬೈಕ್​ ಪ್ರೇಮಿ. ಅವರ ಗ್ಯಾರೇಜ್‌ ಐಷಾರಾಮಿ ಬೈಕ್​ ಹಾಗೂ ವಿಂಟೇಜ್ ಕಾರುಗಳಿಂದ ತುಂಬಿದೆ.
  • ಕ್ರಿಕೆಟ್​ಗೂ ಮೊದಲು ಧೋನಿ 2001ರಿಂದ 2003 ರವರೆಗೆ ಖರಗ್‌ಪುರ ರೈಲು ನಿಲ್ದಾಣದಲ್ಲಿ ರೈಲು ಟಿಕೆಟ್ ಪರೀಕ್ಷಕರಾಗಿ (TTE) ಆಗಿ ಕೆಲಸ ಮಾಡುತ್ತಿದ್ದರು.
ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…

3 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…

3 hours ago

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…

3 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…

3 hours ago

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…

3 hours ago

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…

1 day ago