ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜೋಡುಮಾರ್ಗ ಸರ್ಕಲ್ ನಲ್ಲಿ ಘಟನೆ

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶು ವೈದ್ಯಾಧಿಕಾರಿಂದ ಹಲ್ಲೆ ನಡೆದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜೋಡುಮಾರ್ಗ ಸರ್ಕಲ್ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಕೊಕ್ಕಡ ನಿವಾಸಿ 58 ಪ್ರಾಯದ ಕೃಷ್ಣ ಯಾನೆ ಕಿಟ್ಟ ಅವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಪರೀತ ಜ್ವರ ಇದ್ದ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಅವರು, ಚೇತರಿಕೆ ಕಂಡ ಬಳಿಕ ಕೊಕ್ಕಡಕ್ಕೆ ವಾಪಾಸ್ಸಾಗಿದ್ರು. ಮೃತ ಕೃಷ್ಣ ಅವರ ಆಪ್ತರಾಗಿದ್ದ ಪಶುವೈದ್ಯಾಧಿಕಾರಿ ಕುಮಾರ್ ಅವರು, ಕೃಷ್ಣರವರ ಮನೆಗೆ ಹೋಗಿ, ಇಷ್ಟು ಬೇಗ ಯಾಕೆ ಡಿಸ್ಚಾರ್ಜ್ ಆಗಿ ಬಂದೆ ಎಂದು ಒಂದು ಏಟನ್ನು ಕೊಟ್ಟಿದ್ದಾರೆ. ಹೊಡೆದ ರಭಸಕ್ಕೆ ಸ್ಥಳದಲ್ಲೇ ಕೃಷ್ಣ ಸಾವನ್ನಪ್ಪಿದ್ದು, ಆರೋಪಿ ಪಶುವೈದ್ಯ ಕುಮಾರ್ನನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ.



