ಬೆಳಗ್ಗೆ ಎದ್ದು ಮೊದಲು ಕುಡಿಯುವುದೇ ಚಹಾ. ಇದನ್ನು ಕುಡಿದ ಮೇಲೆ ಸಾಕಷ್ಟು ಜನರು ಮುಂದಿನ ಕೆಲಸ ಮಾಡಲು ಶುರು ಮಾಡ್ತಾರೆ. ಮನೆಯಲ್ಲಿ ಟೀ ಕುಡಿದಿಲ್ಲ ಎಂದರೂ ಬಿದಿ ಬದಿಯ ಅಂಗಡಿಗಳಲ್ಲಿ ಕುಡಿಯುವುದು ಅಭ್ಯಾಸ ಆಗಿ ಬಿಟ್ಟಿದೆ. ಈ ರೀತಿ ಹೊರಗೆ ಟೀ ಕುಡಿಯುವ ಮುನ್ನ ಕೊಂಚ ಜಾಗೃತಿ ವಹಿಸುವುದು ಉತ್ತಮ. ಏಕೆಂದರೆ ಚಹಾಗೆ ಹಾಕುವ ಪುಡಿಗಳಿಂದಲೂ ನಮ್ಮ ಜೀವಕ್ಕೆ ಆಪತ್ತು ಕಾದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುವ ಟೀ ಪುಡಿಗಳಿಂದಲೂ ಅಪಾಯ ಕಾದಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಚಹಾ ಸಿಗುತ್ತದೆ ಎಂದು ಕುಡಿದರೆ ಪ್ರಾಣಕ್ಕೆ ಆಪತ್ತು ಇದೆ. ಟೀ ಪುಡಿ ಅಷ್ಟೇ ಅಲ್ಲ, ಸಾಂಬಾರ್ ಪುಡಿಗಳಿಂದಲೂ ಭಾರೀ ಅಪಾಯ ನಮಗೆಲ್ಲ ಕಾದಿದೆ. ಹೀಗಂತ ಹೇಳುತ್ತಿರುವುದು ನಾವಲ್ಲ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರೇ ಹೇಳಿದ್ದಾರೆ.
ಟೀ ಪುಡಿಗಳ ಪ್ರತಿಷ್ಠಿತ ಕಂಪನಿಗಳಿಂದಲೇ ಸದ್ಯಕ್ಕೆ ಯಡವಟ್ಟು ಆಗುತ್ತಿದೆ. ಇದು ಒಂದೋ, ಎರಡೋ ಕಂಪನಿಗಳಿಂದ ಈ ರೀತಿ ಆಗುತ್ತಿಲ್ಲ. 10ಕ್ಕೂ ಹೆಚ್ಚು ಚಹಾ ಕಂಪನಿಗಳಿಂದ ಸಮಸ್ಯೆ ಆಗುತ್ತಿದೆ. ಯಾವುದೇ ಪ್ರಾಡಕ್ಟ್ ಬ್ರ್ಯಾಂಡ್ ಹೆಸರಲ್ಲಿ ರಿಜಿಸ್ಟರ್ ಆಗುವಾಗ ಯಾವ ಪ್ರಮಾಣದಲ್ಲಿ ಅದರಲ್ಲಿ ಸಾಮಾಗ್ರಿಗಳನ್ನು, ಕೆಮಿಕಲ್ಗಳನ್ನ, ಕಲರ್ಗಳನ್ನ ಹಾಕಲಾಗುತ್ತದೆ ನಮೂದು ಮಾಡಿಸುತ್ತಾರೆ. ಆದರೆ ಮಾಲೀಕರು ತನ್ನ ಬ್ರ್ಯಾಂಡ್ ಮೂಲವನ್ನು ಉಳಿಸಿಕೊಳ್ಳುವುದು ಕರ್ತವ್ಯ ಆಗಿರುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬ್ರ್ಯಾಂಡ್ನ ವಸ್ತು ಕಳಪೆ ಆಗಿ ಬಿಡುತ್ತದೆ. ಇಂತಹ ಬ್ರ್ಯಾಂಡ್ ವಸ್ತುಗಳನ್ನು ಬಳಸುವುದು ಅಪಾಯ ಆಗಿರುತ್ತೆ ಎಂದಿದ್ದಾರೆ.
ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…