ಬೆಳಗ್ಗೆ ಎದ್ದು ಮೊದಲು ಕುಡಿಯುವುದೇ ಚಹಾ. ಇದನ್ನು ಕುಡಿದ ಮೇಲೆ ಸಾಕಷ್ಟು ಜನರು ಮುಂದಿನ ಕೆಲಸ ಮಾಡಲು ಶುರು ಮಾಡ್ತಾರೆ. ಮನೆಯಲ್ಲಿ ಟೀ ಕುಡಿದಿಲ್ಲ ಎಂದರೂ ಬಿದಿ ಬದಿಯ ಅಂಗಡಿಗಳಲ್ಲಿ ಕುಡಿಯುವುದು ಅಭ್ಯಾಸ ಆಗಿ ಬಿಟ್ಟಿದೆ. ಈ ರೀತಿ ಹೊರಗೆ ಟೀ ಕುಡಿಯುವ ಮುನ್ನ ಕೊಂಚ ಜಾಗೃತಿ ವಹಿಸುವುದು ಉತ್ತಮ. ಏಕೆಂದರೆ ಚಹಾಗೆ ಹಾಕುವ ಪುಡಿಗಳಿಂದಲೂ ನಮ್ಮ ಜೀವಕ್ಕೆ ಆಪತ್ತು ಕಾದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುವ ಟೀ ಪುಡಿಗಳಿಂದಲೂ ಅಪಾಯ ಕಾದಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಚಹಾ ಸಿಗುತ್ತದೆ ಎಂದು ಕುಡಿದರೆ ಪ್ರಾಣಕ್ಕೆ ಆಪತ್ತು ಇದೆ. ಟೀ ಪುಡಿ ಅಷ್ಟೇ ಅಲ್ಲ, ಸಾಂಬಾರ್ ಪುಡಿಗಳಿಂದಲೂ ಭಾರೀ ಅಪಾಯ ನಮಗೆಲ್ಲ ಕಾದಿದೆ. ಹೀಗಂತ ಹೇಳುತ್ತಿರುವುದು ನಾವಲ್ಲ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರೇ ಹೇಳಿದ್ದಾರೆ.
ಟೀ ಪುಡಿಗಳ ಪ್ರತಿಷ್ಠಿತ ಕಂಪನಿಗಳಿಂದಲೇ ಸದ್ಯಕ್ಕೆ ಯಡವಟ್ಟು ಆಗುತ್ತಿದೆ. ಇದು ಒಂದೋ, ಎರಡೋ ಕಂಪನಿಗಳಿಂದ ಈ ರೀತಿ ಆಗುತ್ತಿಲ್ಲ. 10ಕ್ಕೂ ಹೆಚ್ಚು ಚಹಾ ಕಂಪನಿಗಳಿಂದ ಸಮಸ್ಯೆ ಆಗುತ್ತಿದೆ. ಯಾವುದೇ ಪ್ರಾಡಕ್ಟ್ ಬ್ರ್ಯಾಂಡ್ ಹೆಸರಲ್ಲಿ ರಿಜಿಸ್ಟರ್ ಆಗುವಾಗ ಯಾವ ಪ್ರಮಾಣದಲ್ಲಿ ಅದರಲ್ಲಿ ಸಾಮಾಗ್ರಿಗಳನ್ನು, ಕೆಮಿಕಲ್ಗಳನ್ನ, ಕಲರ್ಗಳನ್ನ ಹಾಕಲಾಗುತ್ತದೆ ನಮೂದು ಮಾಡಿಸುತ್ತಾರೆ. ಆದರೆ ಮಾಲೀಕರು ತನ್ನ ಬ್ರ್ಯಾಂಡ್ ಮೂಲವನ್ನು ಉಳಿಸಿಕೊಳ್ಳುವುದು ಕರ್ತವ್ಯ ಆಗಿರುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬ್ರ್ಯಾಂಡ್ನ ವಸ್ತು ಕಳಪೆ ಆಗಿ ಬಿಡುತ್ತದೆ. ಇಂತಹ ಬ್ರ್ಯಾಂಡ್ ವಸ್ತುಗಳನ್ನು ಬಳಸುವುದು ಅಪಾಯ ಆಗಿರುತ್ತೆ ಎಂದಿದ್ದಾರೆ.
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…
ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಸ್ಥಳಿಯರು ಶ್ರಮ…
ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆ ಹೊಂಡಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು…
ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದ…
ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ ಮರೋಳಿ ಹತ್ತಿರ ಜೂನ್ 11 ರಂದು ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತಿದ್ದವರನ್ನು ಬಂಧಿಸಲಾಗಿದೆ.…