ಕುಕ್ಕೆ ಸುಬ್ರಹ್ಮಣ್ಯದ ಇಂಜಾಡಿ ಬಳಿಯ ಕಸ ವಿಲೇವಾರಿ ಘಟಕದಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದು ಕೊಳೆಯಲು ಆರಂಭವಾಗಿದೆ, ವಾಸನೆಯೂ ಎದ್ದೇಳುತ್ತಿದ್ದು ರೋಗ ಹರಡುವ ಭೀತಿಯೂ ಎದುರಾಗಿದೆ.
ದಿನಂಪ್ರತಿ ಸಾವಿರಾರು ಜನರು ಬರುವ ಸುಬ್ರಹ್ಮಣ್ಯದಲ್ಲಿ ಗ್ರಾ.ಪಂ ವತಿಯಿಂದ ನಿರ್ವಹಿಸಲ್ಪಡುವ ಕಸ ವಿಲೇವಾರಿ ಘಟಕ ಇಂಜಾಡಿ ಬಳಿ ಇದೆ. ಇಲ್ಲಿಗೆ ಪಂಚಾಯತ್ ನ ಕಸ ವಿಲೇವಾರಿ ಘಟಕದ ವಾಹನಗಳು ಕಸ ಸಂಗ್ರಹಿಸಿ ತಂದು ಹಾಕುತ್ತಿವೆ. ಇಲ್ಲಿ ಸಂಜೀವಿನಿಯರು ಹಾಗೂ ಗ್ರಾ.ಪಂ ದಿನಗೂಲಿಯ ಕೆಲವರು ಸೇರಿ ಕಸ ವಿಂಗಡನೆ ಮಾಡುತಿದ್ದಾರೆ. ಆದರೆ ಇಲ್ಲಿ ವಿಂಗಡನೆ ಆಗುತ್ತಿರುವ ಕಸ ಮತ್ತು ಇಲ್ಲಿಗೆ ಸರಬರಾಜು ಆಗುವ ಕಸಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಕಸವೂ ಸಂಗ್ರಹವಾಗುತ್ತಿದೆ. ಇದೇ ಮುಂದುವರೆದರೆ ಮುಂದೊಂದು ದಿನ ಇದು ಅಪಾಯಕಾರಿಯಾಗುವ ಮುನ್ಸೂಚನೆ ಇದೆ. ಸುಬ್ರಹ್ಮಣ್ಯ ಜನತೆಯೂ ಈ ಬಗ್ಗೆ ವಾಸ್ತವ ತಿಳಿಯುವ ಪ್ರಯತ್ನ ಮಾಡಿಲ್ಲ.
ಅಲ್ಪ ಪ್ರಮಾಣದ ವಿಲೇವಾರಿ, ದುರ್ವಾಸನೆ ಭಾರಿ: ಇಲ್ಲಿ ದಿನ ಪ್ರತಿ ಕಸ ಸಂಗ್ರಹವಾಗುತಿದ್ದರೂ ಅಲ್ಪ ಪ್ರಮಾಣದ ಕಸವಷ್ಟೇ ವಿಲೇವಾರಿಯಾಗುತಿದೆ. ರಟ್ಟು, ಹಾಲಿನ ಪ್ಯಾಕೆಟ್, ನೀರಿನ ಬಾಟಲ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅಂತದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗುತಿದ್ದಾರೆ. ಆದರೆ ಈಗಾಗಲೇ ಬಿದ್ದಿರುವ ಲೋಡ್ ಗಟ್ಟಳೆ ಕಸ ಕೊಳೆಯುತಿದ್ದು ಅದು ಭಾರಿ ಪ್ರಮಾಣದಲ್ಲಿ ದುರ್ವಾಸನೆಯೂ ಎದ್ದಿದೆ. ಅಲ್ಲಿಂದ ಬರುವ ಕೊಳಚೆ ನೀರು ನೇರವಾಗಿ ಕಣಿ ಸೇರಿ ನದಿ ಸೇರುತ್ತಿದೆ.
ಕೈಕೊಟ್ಟ ಬರ್ನಿಂಗ್ ಮೆಶಿನ್: ಗ್ರಾ.ಪಂ ವತಿಯಿಂದ ಪ್ಲಾಸ್ಟಿಕ್ ಬರ್ನಿಂಗ್ ಮೆಶಿನ್ ಕೆಲವೇ ವರ್ಷಗಳ ಹಿಂದೆಯಷ್ಟೆ ಅಳವಡಿಸಲಾಗಿದ್ದು ದಿನಪ್ರಂತಿ ವಿಲೇವಾರಿ ಆದ ಪ್ಲಾಸ್ಟಿಕ್ ನ್ನು ಕೆಮಿಕಲ್ ಹಾಕಿ ಬರ್ನ್ ಮಾಡಲಾಗುತಿತ್ತು. ಆದರೆ ಈ ಯಂತ್ರಗಳು ಕೈಕೊಟ್ಟು ಬರ್ನಿಂಗ್ ನಿಲ್ಲಿಸಲಾಗಿದೆ. ಯತ್ರಗಳ ಭಾಗಗಳು ತುಕ್ಕು ಹಿಡಿದು ಯತ್ರಗಳು ಕೆಲಸ ಮಾಡುವ ಲಕ್ಷ್ಮಣವೇ ಇಲ್ಲ. ಯಂತ್ರ ಅಳವಡಿಕೆಯಲೂ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಆರೋಪಗಳಿವೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…