ಕುಕ್ಕೆ ಸುಬ್ರಹ್ಮಣ್ಯದ ಇಂಜಾಡಿ ಬಳಿಯ ಕಸ ವಿಲೇವಾರಿ ಘಟಕದಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದು ಕೊಳೆಯಲು ಆರಂಭವಾಗಿದೆ, ವಾಸನೆಯೂ ಎದ್ದೇಳುತ್ತಿದ್ದು ರೋಗ ಹರಡುವ ಭೀತಿಯೂ ಎದುರಾಗಿದೆ.
ದಿನಂಪ್ರತಿ ಸಾವಿರಾರು ಜನರು ಬರುವ ಸುಬ್ರಹ್ಮಣ್ಯದಲ್ಲಿ ಗ್ರಾ.ಪಂ ವತಿಯಿಂದ ನಿರ್ವಹಿಸಲ್ಪಡುವ ಕಸ ವಿಲೇವಾರಿ ಘಟಕ ಇಂಜಾಡಿ ಬಳಿ ಇದೆ. ಇಲ್ಲಿಗೆ ಪಂಚಾಯತ್ ನ ಕಸ ವಿಲೇವಾರಿ ಘಟಕದ ವಾಹನಗಳು ಕಸ ಸಂಗ್ರಹಿಸಿ ತಂದು ಹಾಕುತ್ತಿವೆ. ಇಲ್ಲಿ ಸಂಜೀವಿನಿಯರು ಹಾಗೂ ಗ್ರಾ.ಪಂ ದಿನಗೂಲಿಯ ಕೆಲವರು ಸೇರಿ ಕಸ ವಿಂಗಡನೆ ಮಾಡುತಿದ್ದಾರೆ. ಆದರೆ ಇಲ್ಲಿ ವಿಂಗಡನೆ ಆಗುತ್ತಿರುವ ಕಸ ಮತ್ತು ಇಲ್ಲಿಗೆ ಸರಬರಾಜು ಆಗುವ ಕಸಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಕಸವೂ ಸಂಗ್ರಹವಾಗುತ್ತಿದೆ. ಇದೇ ಮುಂದುವರೆದರೆ ಮುಂದೊಂದು ದಿನ ಇದು ಅಪಾಯಕಾರಿಯಾಗುವ ಮುನ್ಸೂಚನೆ ಇದೆ. ಸುಬ್ರಹ್ಮಣ್ಯ ಜನತೆಯೂ ಈ ಬಗ್ಗೆ ವಾಸ್ತವ ತಿಳಿಯುವ ಪ್ರಯತ್ನ ಮಾಡಿಲ್ಲ.
ಅಲ್ಪ ಪ್ರಮಾಣದ ವಿಲೇವಾರಿ, ದುರ್ವಾಸನೆ ಭಾರಿ: ಇಲ್ಲಿ ದಿನ ಪ್ರತಿ ಕಸ ಸಂಗ್ರಹವಾಗುತಿದ್ದರೂ ಅಲ್ಪ ಪ್ರಮಾಣದ ಕಸವಷ್ಟೇ ವಿಲೇವಾರಿಯಾಗುತಿದೆ. ರಟ್ಟು, ಹಾಲಿನ ಪ್ಯಾಕೆಟ್, ನೀರಿನ ಬಾಟಲ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅಂತದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗುತಿದ್ದಾರೆ. ಆದರೆ ಈಗಾಗಲೇ ಬಿದ್ದಿರುವ ಲೋಡ್ ಗಟ್ಟಳೆ ಕಸ ಕೊಳೆಯುತಿದ್ದು ಅದು ಭಾರಿ ಪ್ರಮಾಣದಲ್ಲಿ ದುರ್ವಾಸನೆಯೂ ಎದ್ದಿದೆ. ಅಲ್ಲಿಂದ ಬರುವ ಕೊಳಚೆ ನೀರು ನೇರವಾಗಿ ಕಣಿ ಸೇರಿ ನದಿ ಸೇರುತ್ತಿದೆ.
ಕೈಕೊಟ್ಟ ಬರ್ನಿಂಗ್ ಮೆಶಿನ್: ಗ್ರಾ.ಪಂ ವತಿಯಿಂದ ಪ್ಲಾಸ್ಟಿಕ್ ಬರ್ನಿಂಗ್ ಮೆಶಿನ್ ಕೆಲವೇ ವರ್ಷಗಳ ಹಿಂದೆಯಷ್ಟೆ ಅಳವಡಿಸಲಾಗಿದ್ದು ದಿನಪ್ರಂತಿ ವಿಲೇವಾರಿ ಆದ ಪ್ಲಾಸ್ಟಿಕ್ ನ್ನು ಕೆಮಿಕಲ್ ಹಾಕಿ ಬರ್ನ್ ಮಾಡಲಾಗುತಿತ್ತು. ಆದರೆ ಈ ಯಂತ್ರಗಳು ಕೈಕೊಟ್ಟು ಬರ್ನಿಂಗ್ ನಿಲ್ಲಿಸಲಾಗಿದೆ. ಯತ್ರಗಳ ಭಾಗಗಳು ತುಕ್ಕು ಹಿಡಿದು ಯತ್ರಗಳು ಕೆಲಸ ಮಾಡುವ ಲಕ್ಷ್ಮಣವೇ ಇಲ್ಲ. ಯಂತ್ರ ಅಳವಡಿಕೆಯಲೂ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಆರೋಪಗಳಿವೆ.
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…
ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…