ಉಡುಪಿ: ಮಳೆಗಾಲ ಶುರುವಾಯಿತು ಹೊರಾಂಗಣ ವೇದಿಕೆಯ ಯಕ್ಷಗಾನ ಪ್ರದರ್ಶನಗಳಿಗೆ ಇನ್ನು ವಿರಾಮ. ಯಕ್ಷಗಾನದಲ್ಲಿ ದೊಡ್ಡ ದೊಡ್ಡ ಮೇಳಗಳು ವರ್ಷವಿಡೀ ಪ್ರದರ್ಶನ ನೀಡುತ್ತವೆ. ಆದರೆ ಮಳೆಗಾಲ ಬಂದರೆ ಚಿಕ್ಕ ಮೇಳಗಳು ಪ್ರವಾಸ ಹೊರಡುತ್ತವೆ.
ಕಲಾವಿದರು ತಮ್ಮ ಮಳೆಗಾಲದ ಸಂಪಾದನೆಗೋಸ್ಕರ ಚಿಕ್ಕ ಮೆಳಗಳನ್ನು ಕಟ್ಟಿಕೊಂಡು ಮನೆ ಮನೆ ಅಲೆಯುವುದು ದಶಕಗಳಿಂದ ಬಂದ ಪದ್ಧತಿ. ಒಂದು ಪುರುಷ ವೇಷ ಮತ್ತೊಂದು ಸ್ತ್ರೀ ವೇಷ ಜೊತೆಗೆ ಹಿಮ್ಮೆಳದವರು ಚಿಕ್ಕ ಮೇಳ ಕಟ್ಟಿಕೊಂಡು ಮನೆಗಳಿಗೆ ತೆರಳಿ ಪುರಾಣದ ಕಥಾನಕ ಒಂದನ್ನು ಪ್ರದರ್ಶಿಸುತ್ತಾರೆ. ಪ್ರತಿದಿನ ಹತ್ತಾರು ಮನೆಗಳಿಗೆ ಭೇಟಿ ನೀಡುವ ಈ ತಂಡ, ಮನೆಯವರು ಕೊಟ್ಟ ಸಂಭಾವನೆಯನ್ನು ಪಡೆದುಕೊಂಡು ಮಳೆಗಾಲದ ಜೀವನೋಪಾಯ ನಡೆಸುತ್ತಾರೆ. ಸಂಸ್ಕೃತಿಯ ಪ್ರಚಾರದ ಜೊತೆಗೆ ಕಲಾವಿದರ ಕಷ್ಟಗಳಿಗೆ ಚಿಕ್ಕ ಮೇಳಗಳು ಆಸರೆಯಾಗಿವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ತಂಡಗಳು ಮಳೆಗಾಲದಲ್ಲಿ ಚಿಕ್ಕ ಮೇಳದ ಪ್ರದರ್ಶನ ನಡೆಸುತ್ತವೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…