ಉಡುಪಿ: ಮಳೆಗಾಲ ಶುರುವಾಯಿತು ಹೊರಾಂಗಣ ವೇದಿಕೆಯ ಯಕ್ಷಗಾನ ಪ್ರದರ್ಶನಗಳಿಗೆ ಇನ್ನು ವಿರಾಮ. ಯಕ್ಷಗಾನದಲ್ಲಿ ದೊಡ್ಡ ದೊಡ್ಡ ಮೇಳಗಳು ವರ್ಷವಿಡೀ ಪ್ರದರ್ಶನ ನೀಡುತ್ತವೆ. ಆದರೆ ಮಳೆಗಾಲ ಬಂದರೆ ಚಿಕ್ಕ ಮೇಳಗಳು ಪ್ರವಾಸ ಹೊರಡುತ್ತವೆ.
ಕಲಾವಿದರು ತಮ್ಮ ಮಳೆಗಾಲದ ಸಂಪಾದನೆಗೋಸ್ಕರ ಚಿಕ್ಕ ಮೆಳಗಳನ್ನು ಕಟ್ಟಿಕೊಂಡು ಮನೆ ಮನೆ ಅಲೆಯುವುದು ದಶಕಗಳಿಂದ ಬಂದ ಪದ್ಧತಿ. ಒಂದು ಪುರುಷ ವೇಷ ಮತ್ತೊಂದು ಸ್ತ್ರೀ ವೇಷ ಜೊತೆಗೆ ಹಿಮ್ಮೆಳದವರು ಚಿಕ್ಕ ಮೇಳ ಕಟ್ಟಿಕೊಂಡು ಮನೆಗಳಿಗೆ ತೆರಳಿ ಪುರಾಣದ ಕಥಾನಕ ಒಂದನ್ನು ಪ್ರದರ್ಶಿಸುತ್ತಾರೆ. ಪ್ರತಿದಿನ ಹತ್ತಾರು ಮನೆಗಳಿಗೆ ಭೇಟಿ ನೀಡುವ ಈ ತಂಡ, ಮನೆಯವರು ಕೊಟ್ಟ ಸಂಭಾವನೆಯನ್ನು ಪಡೆದುಕೊಂಡು ಮಳೆಗಾಲದ ಜೀವನೋಪಾಯ ನಡೆಸುತ್ತಾರೆ. ಸಂಸ್ಕೃತಿಯ ಪ್ರಚಾರದ ಜೊತೆಗೆ ಕಲಾವಿದರ ಕಷ್ಟಗಳಿಗೆ ಚಿಕ್ಕ ಮೇಳಗಳು ಆಸರೆಯಾಗಿವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ತಂಡಗಳು ಮಳೆಗಾಲದಲ್ಲಿ ಚಿಕ್ಕ ಮೇಳದ ಪ್ರದರ್ಶನ ನಡೆಸುತ್ತವೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…