ಕರಾವಳಿ

ಶಿರ್ತಾಡಿ ಗ್ರಾಮ ಪಂಚಾಯಿತ್ ಬೇಜವಾಬ್ದಾರಿಯಿಂದ ಸ್ಥಳೀಯರು ಗರಂ, ಮೇಲ್ಮನವಿ ಹಾಗೂ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ

ದಕ್ಷಿಣ ಕನ್ನಡ : ಜಿಲ್ಲೆಯ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಮೂಡು ಕೋಣಾಜೆ ಗ್ರಾಮದ ಮಾವಿನಕಟ್ಟೆ (ಕುಕ್ಕುದ ಕಟ್ಟೆ ) ಎಂಬಲ್ಲಿಂದ ಇಜಿನು, ಕುಂಟಲ, ಕೇದಲ್ಕೆ ಹಾಗೂ ಇತರ ಹಲವು ಕಡೆಗೆ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಮೊಣಕಾಲು ಮಟ್ಟಕ್ಕೆ ಕೆಸರು ತುಂಬಿ ವಾಹನ ಸಂಚಾರ ಪರಿಸ್ಥಿತಿ ಅಯೋಮಯವಾಗಿದೆ. ಜೊತೆಗೆ ನಡೆದಾಡುವುದು ಕಷ್ಟ ಸಾಧ್ಯ ಎನಿಸಿದೆ. ಹಲವು ವೃದ್ಧರು ಮತ್ತು ಮಕ್ಕಳು ಸಹಿತ ಜನರು ವಾಹನ ಸಂಚಾರ ಸಾಧ್ಯವಿಲ್ಲದೆ, ನಡೆದಾಡಲು ಸಾಧ್ಯವಿಲ್ಲದೆ, ಕಂಗೆಟ್ಟು ಸ್ಥಳೀಯ ಪಂಚಾಯಿತಿಗೆ ಹಲವು ಬಾರಿ ವಿನಂತಿಸಿದ್ದರು, ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ. ಊರವರೇ ಸೇರಿ ಒಂದಷ್ಟು ಖರ್ಚು ಮಾಡಿ ಸ್ವಲ್ಪಮಟ್ಟಿನ ರಿಪೇರಿಯನ್ನು ಮಾಡಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು.


ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳೀಯರಂತೆ ವರ್ತಿಸದೆ ಪರದೇಶಿಗಳಂತೆ ವರ್ತಿಸುತ್ತಿದ್ದಾರೆ, ಹಾಗೂ ಸ್ಥಳೀಯರ ಸಮಸ್ಯೆಯನ್ನು ಆಲಿಸಿದ ಬಳಿಕ ಆಶ್ಚರ್ಯ ಚಕಿತರಾಗಿ ಮುಖ ನೋಡುತ್ತಿದ್ದಾರೆ ವಿನಹ ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ ಎಂಬುದು ಸ್ಥಳೀಯರ ಮಾತಾಗಿದೆ.
ಕಣ್ಣಿಗೆ ರಾಚುವಂತಿರುವ ಸಾರ್ವಜನಿಕ ಸಮಸ್ಯೆಗೆ ಮನವಿ ನೀಡಿ ಎಂದು ಸ್ಥಳೀಯರನ್ನ ಸತಾಯಿಸುತ್ತಿದ್ದಾರೆ, ಸಾರ್ವಜನಿಕ ಸೇವೆಗೆ ಆಯ್ಕೆಯಾದ ಮತ್ತು ಮೀಸಲಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಸಾರ್ವಜನಿಕ ರಸ್ತೆ ರಿಪೇರಿಗಾಗಿ ಮನವಿ ನೀಡಿ ಎಂಬುವುದು ವಿಪರ್ಯಾಸವೇ ಸರಿ, ಯಾಕಂದ್ರೆ ಸಾರ್ವಜನಿಕ ಸಮಸ್ಯೆಗೆ ಮನವಿ ನೀಡುವ ಅಗತ್ಯವಿಲ್ಲ ಹಾಗೂ ಸಮಸ್ಯೆ ನೋಡಿ ಸರಿ ಮಾಡಬೇಕಾದುದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕರ್ತವ್ಯ, ಹಾಗೂ ಅದಕ್ಕಿಂದೇ ಜನರು ಅವರನ್ನ ಚುನಾಯಿಸಿರುವುದು ಮತ್ತು ನೇಮಿಸಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ, ಮತ್ತು ಅದುವೇ ವಾಸ್ತವ ಸತ್ಯ.


ರಸ್ತೆಯ ಇಕ್ಕಲಗಳಲ್ಲಿ ಪೊದೆ ಗಿಡ ಗಂಟೆಗಳು ತುಂಬಿದ್ದು, ಒಂದೆಡೆ ಕಾಡು ಪ್ರಾಣಿಗಳ ಹಾವಳಿ, ಇನ್ನೊಂದೆಡೆ ಕುಡುಕರ ಹಾವಳಿಯಿಂದ, ಶಾಲಾ ಮಕ್ಕಳು ಮತ್ತು ಹೆಂಗಳೆಯರು ಜೀವ ಭಯದಿಂದ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಹಲವು ಬಾರಿ ಮೌಕಿಕ ಮತ್ತು ಲಿಖಿತ ಮನವಿ ಸ್ವೀಕರಿಸಿದ ಪಂಚಾಯತ್ , ಕ್ರಮ ಕೈಗೊಂಡಿಲ್ಲ ಎಂಬುದು ಗಮನಾರ್ಹ.
ನೊಂದ ಸಾರ್ವಜನಿಕರ ಮಾತಿನ ಪ್ರಕಾರ, ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದು, ಜನರ ಓಟು ಪಡೆದ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಸೇರಿ ನೋಟು ಎಣಿಸುವ ಕೆಲಸದಲ್ಲಿ ಬಿಜಿಯಾಗಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು,
ಸುಶಿಕ್ಷಿತ ದಕ್ಷಿಣ ಕನ್ನಡದಲ್ಲಿ, ಶಿರ್ತಾಡಿ ಪಂಚಾಯಿತಿನ ಈ ಮೇಲೆ ತಿಳಿಸಿದ ಸ್ಥಳದಲ್ಲಿ ಸಂಚಾರಕ್ಕೆ ಯೋಗ್ಯ ರಸ್ತೆ ಇಲ್ಲ, ಹಲವು ಸಮಯಗಳಿಂದ ಕಾಟ ಕೊಡುತ್ತಿರುವ ಕಾಡು ಪ್ರಾಣಿಗಳ ಹಾವಳಿ ಬಗೆಹರಿದಿಲ್ಲ , ರಸ್ತೆಗಳ ಪಕ್ಕದ ಪೊದೆ ಗಿಡ ಗಂಟಿ ಗಳನ್ನ ಹಲವು ಸಮಯಗಳಿಂದ ತೆಗೆದಿಲ್ಲ, ದಾರಿದೀಪ ಒದಗಿಸಿಲ್ಲ, ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ, ಆದರೂ ಎಲ್ಲವೂ ನೀಡಿದಂತೆ ವರ್ತಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯ ಜನರು ಗರಂ ಆಗಿದ್ದು ಮುಂದಿನ ದಿನಗಳಲ್ಲಿ ಇದು ರಾಜ್ಯಮಟ್ಟದ ಸುದ್ದಿ ಆದ್ರೂ ಆಶ್ಚರ್ಯ ಪಡಬೇಕಾಗಿಲ್ಲ.
ಬಲ್ಲ ಮಾಹಿತಿಗಳ ಪ್ರಕಾರ ಸಮಸ್ಯ ಕೂಡಲೇ ಬಗೆಹರಿಯದಿದ್ದರೆ ಸ್ಥಳೀಯ ಅಧಿಕಾರಿಗಳ ವಿವೇಕ ರಹಿತ ಅಧಿಕಾರ ಮತ್ತು ಅವ್ಯವಸ್ಥೆ ಕುರಿತು ಮೇಲ್ಮನವಿ, ಹಾಗೂ ನ್ಯಾಯಾಲಯದ ಮೊರೆ ಹೋಗಲು ಸ್ಥಳೀಯರು ಚಿಂತಿಸಿದ್ದಾರೆ, ಎನ್ನಲಾಗಿದ್ದು, ಕೆಲ ಸಮಯಗಳ ಮೊದಲು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಸ್ಥಳೀಯ ಅವ್ಯವಸ್ಥೆಗಳ ಕುರಿತು ಮಕ್ಕಳು ಪ್ರೆಸ್ ಮೀಟ್ (ಪತ್ರಿಕಾಗೋಷ್ಠಿ ) ಮಾಡಿ ಗಮನ ಸೆಳೆದಿದ್ದು ಇಲ್ಲಿ ನೆನಪಿಸಬಹುದಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…

17 hours ago

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…

17 hours ago

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…

17 hours ago

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…

17 hours ago

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ಸಮೀಪದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು…

17 hours ago

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಬೀರತಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ವಸ್ತು ಹಾಕಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳ…

17 hours ago