ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ಹೂವಿನ ವ್ಯಾಪಾರಿ ಜಯ ಕುಮಾರ್ ಮತ್ತು ಜಯಶ್ರೀ ದಂಪತಿಗಳ ನೇತೃತ್ವದ ಬಳಗವು ಕಳೆದ 20 ವರ್ಷಗಳಿಂದ ಯಾವುದೇ ಪ್ರತಿ ಫಲಾಫೇಕ್ಷೆ ಪಡೆಯದೆ ಕರಾವಳಿ ಭಾಗದ ಎಲ್ಲಾ ಕಡೆಗಳಲ್ಲಿನ ಅಫೇಕ್ಸಿತ ಭಕ್ತರನ್ನು ಒಟ್ಟುಗೂಡಿಸಿಕೊಂಡು ದೇಶದ ವಿವಿಧ ಪುಣ್ಯ ತೀರ್ಥ ಕ್ಷೆತ್ರಗಳನ್ನು ಭೇಟಿ ಮಾಡಿಸಿ ದೇವರ ದರ್ಶನ ಭಾಗ್ಯವನ್ನು ತೋರಿಸಿ ಕೊಟ್ಟವರು.
ಅದರಂತೆ 21 ನೇ ವರ್ಷದಲ್ಲಿ ಹಮ್ಮಿಕೊಂಡ ಪುಣ್ಯ ತೀರ್ಥ ಕ್ಷೆತ್ರಗಳಲ್ಲಿ ನೇಪಾಲ ದೇಶದಲ್ಲಿ ಇರುವ ಚೀನಾ ಗಡಿ ಭಾಗದಲ್ಲಿನ ಮುಕ್ತಿನಾಥ ದೇವಸ್ಥಾನವೂ ಒಂದಾಗಿರುತ್ತದೆ.
ಅದರಂತೆ ಜಯಕುಮಾರ್ ನೇತೃತ್ವ ತಂಡದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದ ಸುಮಾರು 117 ಮಂದಿ ಭಕ್ತರು ಒರಿಸ್ಸಾದ ಪುರಿ ಜಗನಾಥ ದೇವಾಲಯ, ಜಾರ್ಕಂಡ್ ನಲ್ಲಿನ ಬಾಬಾ ಬೈದ್ಯಾನಾಥ ದೇವಸ್ಥಾನ, ನೇಪಾಲದ ಜನಕಗಿರಿಯ ಸೀತಾಮಾತಾ ಮಂದಿರ, ಪಶುಪತಿ ದೇವಾಲಯ ದರ್ಶನ್ ಪಡೆದುಕೊಂಡು ಪರಮ ಪವಿತ್ರ ಕ್ಷೆತ್ರವಾದ ಮುಕ್ತಿನಾಥನ.
ದರ್ಶನಕ್ಕೆಂದು ಹೊರಟು ರಸ್ತೆ ಸಾಗುವ ಸಂದರ್ಭದಲ್ಲಿ ದೊಡ್ಡದಾದೊಂದು ಗುಡ್ಡವೊಂದು ಜರಿದು ಬಿದ್ದು ಮುಕ್ತಿನಾಥ ದೇವಸ್ಥಾನ ಸಂಚಾರಕ್ಕೆ ಅಡಚಣೆಯಾಗಿತ್ತು.
ಮಾರ್ಗ ಮದ್ಯೆ ಭಕ್ತರನೊಳಗೊಂಡ ಬಸ್ ಗಳು ನಿಂತಿರುವಾಗ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿಬಿದ್ದು ಬಸ್ಸಿನ ಮೇಲೆ ಬಿದ್ದುದರಿಂದ ಸ್ವಲ್ಪದರಲ್ಲೇ ಕೆಳಗಿರುವ ಭಕ್ತರು ಪ್ರಾಣಪಾಯದಿಂದ ಪಾರಾಗಿರುವುದು ಪವಾಡವೇ ಸರಿ,
ಕೆಲವೊಂದು ಕಡೆಗಳಲ್ಲಿ ರಸ್ತೆಯು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಪ್ರಯಾಣಿಕರು ತುಂಬಿಕೊಂಡಿರುವ ಬಸ್ಸುಗಳನ್ನು ಹಗ್ಗ ಕಟ್ಟಿ ಎಲೆದಾಡಿ, ದೂಡಿಕೊಂಡು ಹೋಗಿರುವುದು.
ಇಂತಹ ಪ್ರಾಕ್ರತೀಕ ವಿಕೋಪದ ಭಯಾನಕ ಸಂಕಷ್ಟ ಹಾದಿಯಲ್ಲೂ ಭಕ್ತರಿಗೆ ಧೈರ್ಯ ತುಂಬಿಸಿದ ಜಯಕುಮಾರ್ ರವರು, ಹಾಗೇನೇ ವಾಹನ ಚಾಲಕರೂ ಸಮೇತ ಇದಕ್ಕೆ ಸಾಥ್ ನೀಡಿರುವುದರಿಂದ ಕರಾವಳಿಯ ತುಳುನಾಡ 117 ಮಂದಿ ಭಕ್ತರು ಜೀವದ ಹಂಗು ತೊರೆದು ನೇಪಾಲ ಮುಕ್ತಿನಾಥ ದೇವರ ದರ್ಶನ ಪಡೆದು ಅಯೋದ್ಯೆ ದತ್ತ ಪ್ರಯಾಣ ಬೆಳೆಸಿದರು.
ಮುಂದೆ ಕಾಶಿ ವಿಶ್ವನಾಥ ದೇವಾಲಯ, ವೈಷ್ಣನೋ ದೇವಿ ದರ್ಶನ್ ಮುಗಿಸಿ ಮಂಗಳೂರಿಗೆ ವಾಪಸ್ ಅಗಲಿರುವರು ಎಂದೂ ತೆರಲಿರುವ ಭಕ್ತರೋರ್ವರು ಮಾಹಿತಿ ನೀಡಿದ್ದಾರೆ.
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…
ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಸ್ಥಳಿಯರು ಶ್ರಮ…
ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆ ಹೊಂಡಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು…
ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದ…
ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ ಮರೋಳಿ ಹತ್ತಿರ ಜೂನ್ 11 ರಂದು ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತಿದ್ದವರನ್ನು ಬಂಧಿಸಲಾಗಿದೆ.…