ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ಹೂವಿನ ವ್ಯಾಪಾರಿ ಜಯ ಕುಮಾರ್ ಮತ್ತು ಜಯಶ್ರೀ ದಂಪತಿಗಳ ನೇತೃತ್ವದ ಬಳಗವು ಕಳೆದ 20 ವರ್ಷಗಳಿಂದ ಯಾವುದೇ ಪ್ರತಿ ಫಲಾಫೇಕ್ಷೆ ಪಡೆಯದೆ ಕರಾವಳಿ ಭಾಗದ ಎಲ್ಲಾ ಕಡೆಗಳಲ್ಲಿನ ಅಫೇಕ್ಸಿತ ಭಕ್ತರನ್ನು ಒಟ್ಟುಗೂಡಿಸಿಕೊಂಡು ದೇಶದ ವಿವಿಧ ಪುಣ್ಯ ತೀರ್ಥ ಕ್ಷೆತ್ರಗಳನ್ನು ಭೇಟಿ ಮಾಡಿಸಿ ದೇವರ ದರ್ಶನ ಭಾಗ್ಯವನ್ನು ತೋರಿಸಿ ಕೊಟ್ಟವರು.
ಅದರಂತೆ 21 ನೇ ವರ್ಷದಲ್ಲಿ ಹಮ್ಮಿಕೊಂಡ ಪುಣ್ಯ ತೀರ್ಥ ಕ್ಷೆತ್ರಗಳಲ್ಲಿ ನೇಪಾಲ ದೇಶದಲ್ಲಿ ಇರುವ ಚೀನಾ ಗಡಿ ಭಾಗದಲ್ಲಿನ ಮುಕ್ತಿನಾಥ ದೇವಸ್ಥಾನವೂ ಒಂದಾಗಿರುತ್ತದೆ.
ಅದರಂತೆ ಜಯಕುಮಾರ್ ನೇತೃತ್ವ ತಂಡದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದ ಸುಮಾರು 117 ಮಂದಿ ಭಕ್ತರು ಒರಿಸ್ಸಾದ ಪುರಿ ಜಗನಾಥ ದೇವಾಲಯ, ಜಾರ್ಕಂಡ್ ನಲ್ಲಿನ ಬಾಬಾ ಬೈದ್ಯಾನಾಥ ದೇವಸ್ಥಾನ, ನೇಪಾಲದ ಜನಕಗಿರಿಯ ಸೀತಾಮಾತಾ ಮಂದಿರ, ಪಶುಪತಿ ದೇವಾಲಯ ದರ್ಶನ್ ಪಡೆದುಕೊಂಡು ಪರಮ ಪವಿತ್ರ ಕ್ಷೆತ್ರವಾದ ಮುಕ್ತಿನಾಥನ.
ದರ್ಶನಕ್ಕೆಂದು ಹೊರಟು ರಸ್ತೆ ಸಾಗುವ ಸಂದರ್ಭದಲ್ಲಿ ದೊಡ್ಡದಾದೊಂದು ಗುಡ್ಡವೊಂದು ಜರಿದು ಬಿದ್ದು ಮುಕ್ತಿನಾಥ ದೇವಸ್ಥಾನ ಸಂಚಾರಕ್ಕೆ ಅಡಚಣೆಯಾಗಿತ್ತು.
ಮಾರ್ಗ ಮದ್ಯೆ ಭಕ್ತರನೊಳಗೊಂಡ ಬಸ್ ಗಳು ನಿಂತಿರುವಾಗ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿಬಿದ್ದು ಬಸ್ಸಿನ ಮೇಲೆ ಬಿದ್ದುದರಿಂದ ಸ್ವಲ್ಪದರಲ್ಲೇ ಕೆಳಗಿರುವ ಭಕ್ತರು ಪ್ರಾಣಪಾಯದಿಂದ ಪಾರಾಗಿರುವುದು ಪವಾಡವೇ ಸರಿ,
ಕೆಲವೊಂದು ಕಡೆಗಳಲ್ಲಿ ರಸ್ತೆಯು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಪ್ರಯಾಣಿಕರು ತುಂಬಿಕೊಂಡಿರುವ ಬಸ್ಸುಗಳನ್ನು ಹಗ್ಗ ಕಟ್ಟಿ ಎಲೆದಾಡಿ, ದೂಡಿಕೊಂಡು ಹೋಗಿರುವುದು.
ಇಂತಹ ಪ್ರಾಕ್ರತೀಕ ವಿಕೋಪದ ಭಯಾನಕ ಸಂಕಷ್ಟ ಹಾದಿಯಲ್ಲೂ ಭಕ್ತರಿಗೆ ಧೈರ್ಯ ತುಂಬಿಸಿದ ಜಯಕುಮಾರ್ ರವರು, ಹಾಗೇನೇ ವಾಹನ ಚಾಲಕರೂ ಸಮೇತ ಇದಕ್ಕೆ ಸಾಥ್ ನೀಡಿರುವುದರಿಂದ ಕರಾವಳಿಯ ತುಳುನಾಡ 117 ಮಂದಿ ಭಕ್ತರು ಜೀವದ ಹಂಗು ತೊರೆದು ನೇಪಾಲ ಮುಕ್ತಿನಾಥ ದೇವರ ದರ್ಶನ ಪಡೆದು ಅಯೋದ್ಯೆ ದತ್ತ ಪ್ರಯಾಣ ಬೆಳೆಸಿದರು.
ಮುಂದೆ ಕಾಶಿ ವಿಶ್ವನಾಥ ದೇವಾಲಯ, ವೈಷ್ಣನೋ ದೇವಿ ದರ್ಶನ್ ಮುಗಿಸಿ ಮಂಗಳೂರಿಗೆ ವಾಪಸ್ ಅಗಲಿರುವರು ಎಂದೂ ತೆರಲಿರುವ ಭಕ್ತರೋರ್ವರು ಮಾಹಿತಿ ನೀಡಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…