ಕೇವಲ ಕಾಟಾಚಾರ ಮತ್ತು ಪ್ರಚಾರಕ್ಕಾಗಿ ಹಡೀಲುಗದ್ದೆ ಬೇಸಾಯ ಎಂದು ಬಿಂಬಿಸುವ ಕೆಲಸ ಆಗಬಾರದು. ಇದರಿಂದ ಅನ್ನೊಂದಷ್ಟು ಮಂದಿ ಭತ್ತದ ಬೇಸಾಯದತ್ತ ದೃಷ್ಟಿ ಹರಿಸುವಂತಾಗಬೇಕು. ಹಾಗಾಗಿ ವ್ಯವಸ್ಥಿತ ರೀತಿಯಲ್ಲಿ ಭತ್ತದ ಬೇಸಾಯ ನಡೆಯಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಇವರು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ರು.
ಭತ್ತದ ಕೃಷಿಯನ್ನು ಆರಂಭ ಮಾಡುವುದು ಮುಖ್ಯವಲ್ಲ. ಅತ್ಯಂತ ಶ್ರದ್ಧೆಯಿಂದ ಅದನ್ನು ನೋಡಿಕೊಳ್ಳುವುದು. ಭತ್ತದಿಂದ ಅಕ್ಕಿ ತಯಾರಿಸುವ ತನಕ ಅದರ ಹಿಂದೆ ಶ್ರಮ ಪಡುವುದು ಅತೀ ಅಗತ್ಯ. ಈ ಹಿನ್ನಲೆಯಲ್ಲಿ ಭಕ್ತಾಧಿಗಳು, ಪುತ್ತೂರು ದೇವಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆಯನ್ನು ಜೋಡಿಸಿಕೊಂಡು ಭತ್ತ ಬೇಸಾಯ ನಡೆಸಲು ಚಿಂತನೆ ಮಾಡಲಾಗಿದೆ. ಇಲ್ಲಿ ಬೆಳೆಯುವ ಪೈರು ಹಾಗೂ ಭತ್ತದ ತೆನೆಗಳು ಜನತೆಯನ್ನು ಆಕರ್ಷಿಸುವ ರೀತಿಯಲ್ಲಿ ಬೆಳೆಯುವಂತೆ ಮಾಡುವ ಕೆಲಸ ನಡೆಯಬೇಕು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥಿಸಿದ್ರು. ತೆಂಗಿನ ಕಾಯಿ ಒಡೆಯುವ ಮೂಲಕ ಯಾಂತ್ರೀಕೃತ ಉಳುಮೆಗೆ ಚಾಲನೆ ನೀಡಿದ ಶಾಸಕ ಅಶೋಕ್ ರೈ ಅವರು ನಂತರ ಟ್ರಾöಕ್ಟರ್ ಮೂಲಕ ಉಳುಮೆ ನಡೆಸಿದ್ದಾರೆ.



