ಮಂಜೇಶ್ವರ: ಸಹಕಾರಿ ನೌಕರರೊಂದಿಗೆ ಕೇರಳ ಸರಕಾರ ತೋರಿಸುತ್ತಿರುವ ಅವಗಣನೆ ಕೊನೆಗೊಳಿಸಬೇಕು, ನೀಡಲು ಬಾಕಿ ಇರುವ ಡಿ.ಎ ತಕ್ಷಣ ನೀಡಬೇಕು, ಹುರಿಹಗ್ಗ, ಕೈಮಗ್ಗ, ಸಹಕಾರಿ ಸಂಘಗಳನ್ನು ಸಂರಕ್ಷಿಸಬೇಕು, ಕ್ಷೀರ ಸಂಘಗಳಲ್ಲಿ ಸೆಕ್ಷನ್ 80 ಪೂರ್ಣವಾಗಿ ಜಾರಿಗೊಳಿಸಬೇಕು, ಪಿಗ್ಮಿ ಸಂಗ್ರಾಹಕರನ್ನು ಖಾಯಂ ನೌಕರರಾಗಿ ಅಂಗೀಕರಿಸಬೇಕು, ನೀಡಲು ಬಾಕಿ ಇರುವ ಪೆನ್ಶನ್ ವಿತರಣಾ ಕಮಿಷನ್ ಹಿಂದಿನ ಒಪ್ಪಿಗೆ ಪ್ರಕಾರ ನೀಡಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸೆಪ್ಟೆಂಬರ್ 14,15,16 ತಾರೀಕಿಗೆ ತಿರುವನಂತಪುರ ಸೆಕ್ರಟರಿಯೇಟ್ ಮುಂಭಾಗ ನಡೆಯಲಿರುವ 72 ಗಂಟೆಗಳ ಹೋರಾಟದ ಪೂರ್ವಭಾವಿಯಾಗಿ ಕೇರಳ ಕೋಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್(AITUC) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ KCEC(AITUC)ರಾಜ್ಯಾಧ್ಯಕ್ಷರಾದ ಕಾಂ|| ವಿ.ಎಂ ಅನಿಲ್ ಮಾತನಾಡುತ್ತಿದ್ದರು. KCEC(AITUC)ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆ ವಹಿಸಿದರು. KCEC(AITUC)ರಾಜ್ಯ ಕಾರ್ಯದರ್ಶಿ ಬಿ.ಸುಕುಮಾರನ್, ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ ರಾಜನ್, ಜಿಲ್ಲಾ ಸಮಿತಿ ಸದಸ್ಯ ಬಿ.ವಿಜಯ ಕುಮಾರ್, ಜಯರಾಮ್ ಬಲ್ಲಂಗುಡೇಲ್, ರಾಜನ್ ನಾಯರ್, ಉಮೇಶ್ ಕುಂಜತ್ತೂರ್ ಪದವು, ಹರೀಶ್ ಕೆ.ಆರ್, ಗಂಗಾಧರ್ ಕೊಡ್ಡೆ, ಕೇಶವ ಬಾಯಿಕಟ್ಟೆ, ವಿಜಯನ್ ರಾವಣೇಶ್ವರಂ, ವಲ್ಸಲಾ ಕಾಞಂಗಾಡ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಬಿ.ಸುಕುಮಾರನ್ ಸ್ವಾಗತಿಸಿ, ಕೊನೆಯಲ್ಲಿ ಗಂಗಾಧರ ಕೊಡ್ಡೆ ವಂದಿಸಿದರು.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…