ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಒಕ್ಕೂಟದ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮವು ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕರಾವಳಿ ಪ್ರದೇಶಿಕ ವ್ಶಾಪ್ತಿಯ ಉಡುಪಿ ಪ್ರಾದೇಶಿಕ ಕಛೇರಿ ಪ್ರಾದೇಶಿಕ ನಿರ್ಧೇಶಕರಾದ ದುಗ್ಗೇಗೌಡ ರವರು ಮಾತನಾಡಿ ಸೇವಾ ಮನೊಬಾವನೆಯಲ್ಲಿ ಕೆಲಸನಿರ್ವಹಿಸುತ್ತಿರುವ ಕಡಬ ತಾಲೂಕಿನ ಒಕ್ಕೂಟಗಳ ಅಧ್ಶಕ್ಷರುಗಳು ಪಧಾದಿಕಾರಿಗಳು ಉಪಸಮಿತಿ ಸದಸ್ಶರುಗಳು ಧರ್ಮಸ್ಥಳ ದ ದರ್ಮಾಧಿಕಾರಿಗಳ ಆಶಯದ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸೇವಾ ಮನೊಭಾವನೆಯಿಂದ ಒಕ್ಕೂಟದ ವ್ಶಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಟಾನಿಸಿರುವುದು ಶ್ಲಾಘನೀಯ.ನಿಮ್ಮೆಲ್ಲರ ಪ್ರಯತ್ನದಿಂದ ಕರಾವಳಿ ಪ್ರಾದೇಶಿಕ ಕಛೇರಿಯು ರಾಜ್ಶದಲ್ಲಿಯೇ ಗುರುತಿಸುವ ಚಾಂಪಿಯನ್ ಆಪ್ ದಿ ಚಾಂಪ್ಶನ್ ಪ್ರಶಸ್ತಿಯನ್ನು ಪೂಜ್ಶ ವೀರೇಂದ್ರ ಹೆಗ್ಗಡೆಯವರಿಂದ ಪಡೆದುಕೊಳ್ಳುವಲ್ಲಿ ಸಹಕಾರಿ ಯಾಗಿದೆ.
ಉತ್ತಮ ಕೆಲಸಗಳನ್ನು ಮಾಡುವಾಗ ಒಂದಷ್ಟು ಅಪಸ್ವರಗಳು, ವಿರೋಧಗಳು ಬರಬಹುದು ಅದನ್ನೆಲ್ಲಾ ಮೇಟ್ಟಿನಿಂತು ಸಾಧನೆ ಮಾಡಿದರೆ ಮಾತ್ರ ಗುರಿತಿಸಿಕೊಳ್ಳಲು ಸಾಧ್ಶವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಕಾನೂನು ಬದ್ದವಾಗಿ ಬ್ಶಾಂಕ್ ನ ಸಹಬಾಗಿತ್ವದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ವ್ಶವಹಾರಿಕವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಗೊಂದಲಗಳು ಬೇಡ..ಸ್ವಸಹಾಯ ಸಂಘಗಳ ಆರ್ಥಿಕ ನಿರ್ವಹಣೆಯು ಬ್ಶಾಂಕ್ ನ ನಿಯಮಗಳಿಗೆ ಬದ್ದವಾಗಿಯೇ ನಡೆಯುತ್ತದೆ. ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ .ಕ್ಷೇತ್ರದ ಮಂಜುನಾಥಸ್ವಾಮಿಗೆ ಬದ್ದವಾಗಿ ಕೆಲಸನಿರ್ವಹಿಸಿದಲ್ಲಿ ಸ್ವಾಮಿಯ ಅನುಗ್ರಹ ಪ್ರತೀ ಕುಟುಂಬಕ್ಕೆ ಶಕ್ತಿಯನ್ನು ನೀಡುತ್ತದೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…