ಪ್ರಥಮಥ ಗುರುವಿಗೆ ವಂದಿಸುತ್ತ ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ.
“ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬ ನಾಣ್ನುಡಿಯಂತೆ ನನಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ .ಅಂತೆಯೇ ನನ್ನ ನೆಚ್ಚಿನ ಶಿಕ್ಷಕ ನನ್ನ ತಂದೆಯೇ ಆಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ತಂದೆಯ ಶಿಸ್ತು ,ಸಂಯಮ, ಸಮಯ ಪಾಲನೆ ಮುಂತಾದ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ. ಅವರು ಶಾಲೆಯಲ್ಲಿ ನನ್ನ ಶಿಕ್ಷಕರು ಕೂಡ ಹೌದು. ನನ್ನ ಶಾಲೆಯ ಹೆಸರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ,ನಾಗೂರು ನನ್ನ ತಂದೆ ಇಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನಲ್ಲಿ ಸಣ್ಣ ವಯಸ್ಸಿನಿಂದಲೇ ಕನ್ನಡಾಭಿಮಾನವನ್ನು ಮೂಡಿಸಿದವರು ನನ್ನ ತಂದೆಯೇ ಆಗಿದ್ದಾರೆ. ನಾನು ಮೂರು ವರ್ಷದವಳಿರುವಾಗಲೇ ಕನ್ನಡವನ್ನು ಓದುವುದರ ಜೊತೆಗೆ ಸ್ಪಷ್ಟವಾಗಿ ಬರೆಯುತ್ತಿದ್ದೆ. ಎಲ್ಲರೂ ಇದಕ್ಕೆ ಅಚ್ಚರಿಪಡುತ್ತಿದ್ದರು. ಇದಕ್ಕೆ ಕಾರಣ ನಾನು ದಿನವೂ ನನ್ನ ತಂದೆ ಮನೆಯಲ್ಲಿ. ಪಾಠಕ್ಕೆ ಅಣಿ ಯಾಗುವುದನ್ನು ನೋಡುತ್ತಿದ್ದೆ. ನನ್ನ ತಂದೆ ಉತ್ತಮ ಕಲಾವಿದರು ಹೌದು. ಅವರಿಂದ ನಾನು ನಾಟಕ ಅಭಿನಯ, ಕಾವ್ಯವಾಚನ ಮುಂತಾದ ಕಲೆಗಳನ್ನು ಕೂಡ ಕಲಿತಿದ್ದೇನೆ . “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ಗುರುವಿಗೆ, ಗುರುವಿನ ಸ್ಥಾನದಲ್ಲಿರುವರಿಗೆ ನಾವು ಗೌರವವನ್ನು ನೀಡಬೇಕು. ನನ್ನ ತಂದೆ ಇವೆಲ್ಲ ಗುಣಗಳನ್ನು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ತಂದೆಯಾಗಿ, ಗುರು ಆಗಿ ನನಗೆ ಸರಿ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡಿದ್ದಾರೆ.
ಶ್ರೇಯಾ. ಆರ್ ನಾಯ್ಕ
10ನೇ ತರಗತಿ ಸಂದೀಪನ ಆಂಗ್ಲ ಮಾಧ್ಯಮ ಶಾಲೆ,ನಾಗೂರು
ಉಡುಪಿ ಜಿಲ್ಲೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…