ಕರಾವಳಿ

ನಾನು ಕಂಡ ಆದರ್ಶ ಗುರು ನನ್ನ ರಸಾಯನ ಶಾಸ್ತ್ರ ಪ್ರಾಧ್ಯಾಪಕ ರಾದ ಜಯಾನಂದ ಸುವರ್ಣ ಸರ್…!!

 ತಾಯಿಯ ಬೆಚ್ಚಗಿನ ಅಪ್ಪುಗೆಯನ್ನು ಬಿಡಿಸಿಕೊಂಡು ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಂಡು ಮಗುವೊಂದು ಮನೆಯಿಂದ ಶಾಲೆಗೆ ಕಾಲಿಡುವಾಗ ಕಣ್ಣರಳಿಸಿ ನೋಡುವುದು ಮೊದಲು ಕರಿಹಲಗೆಯನ್ನು…!!ಚಾಕ್  ಪೀಸ್ ನಿಂದ ಬರೆಯುವ ಕುತೂಹಲ.. ಬರೆದುದನ್ನು  ಅಳಿಸುವ ಕುತೂಹಲ…ಹುಟ್ಟುತ್ತಲೇ ಸ್ಮಾರ್ಟ್ ಫೋನ್ ನ ಮೇಲೆ ತೋರು ಬೆರಳಾಡಿಸುವ ಈಗಿನ ಮಕ್ಕಳಿಗೆ ಶಾಲೆಯೊಳಗೆ ಕಾಲಿಟ್ಟಾಗ ಕಾಣಸಿಗುವ ಗ್ರೀನ್ ಬೋರ್ಡ್, ಬ್ಲಾಕ್ ಬೋರ್ಡ್ ನ ಮೇಲೆ ಯಾವುದೇ ಕುತೂಹಲ ವಿರಲಾರದು…ಆದರೆ ಅದೇ ಕರಿಹಲಗೆಯ ಮೇಲೆ ನನಗೆ ಮಾತ್ರ ಬಹಳ ಕುತೂಹಲವಿತ್ತು…!!!


1997 -98 ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಕಾರ್ಕಳ ತಾಲೂಕು ಇಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಪಿಯುಸಿ ವಿಜ್ಞಾನ ವಿಭಾಗದ ಒಳಗೆ ಕಾಲಿಟ್ಟಿದ್ದೆ .ಮೊದಲನೇ ದಿನ ಎರಡನೇ ಅವಧಿ ಕೆಮಿಸ್ಟ್ರಿ ತರಗತಿ …ಆದರ್ಶ ಗುರುವೊಬ್ಬ ಕೇವಲ  ಕರಿಹಲಗೆಯ ಮೇಲೆ ಬರೆಯುವ ಸುಂದರ ಅಕ್ಷರಗಳಿಂದ ಒಂದು ಮಗುವಿನ ಮನಸ್ಸಿಗೆ ಎಷ್ಟು ಪ್ರಭಾವ ಬೀರಬಲ್ಲನೋ ಅವತ್ತೇ ನನಗೆ ಅರ್ಥವಾಗಿದ್ದು..!! ಒಂದು ಮಗುವಿಗೆ ಆ ಅಧ್ಯಾಪಕ ಇಷ್ಟವಾಗಬೇಕಾದರೆ ಕೇವಲ ತಮಾಷೆ  ಮಾಡಿಕೊಂಡಿದ್ದರಾಗದು.ಆತನ ನಡೆ-ನುಡಿ ಗಾಂಭೀರ್ಯ ಮತ್ತು ವ್ಯಕ್ತಿತ್ವವೂ ಪ್ರಭಾವ ಬೀರುತ್ತದೆ. ನಾನು ಕಂಡ ಆ ಆದರ್ಶ ಗುರು ನನ್ನ ರಸಾಯನ ಶಾಸ್ತ್ರ ಪ್ರಾಧ್ಯಾಪಕರು .. ಶ್ರೀ ಜಯಾನಂದ ಸುವರ್ಣ ಸರ್ (ಪ್ರಸ್ತುತ ಸ.ಪ.ಪೂರ್ವ ಕಾಲೇಜು ನಾಲ್ಯಪದವು, ಶಕ್ತಿ ನಗರ, ಮಂಗಳೂರು ತಾಲೂಕು ಇಲ್ಲಿ ಪ್ರಾಂಶುಪಾಲರಾಗಿದ್ದಾರೆ)ಅವರ ರಸಾಯನ ಶಾಸ್ತ್ರ ತರಗತಿಯಲ್ಲಿ ಕುಳಿತುಕೊಳ್ಳುವುದೂ ಒಂದು ಸುಯೋಗ ವೇ ಸರಿ… ಕರಿಹಲಗೆಯ ಮೇಲೆ ಬರೆಯುವ ಸ್ಫುಟವಾದ , ಅಂದವಾದ ಅಕ್ಷರಗಳು.. ಸದಾ ಅವರ ಮುಖದ ಮಂದಹಾಸ.. ಅಳಿಸಲಾಗದ ಕಿರು ನಗು.. ಕೋಪವೇ ಬರದಿರುವ ವ್ಯಕ್ತಿತ್ವ ಇವೆಲ್ಲ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದು ಮತ್ತೊಮ್ಮೆ ಆ ದಿನಗಳು ಮರುಕಳಿಸಬಾರದೇ ಎಂದುಕೊಳ್ಳುತ್ತೇನೆ. ಅವತ್ತಿನ ದಿನಗಳಲ್ಲಿ ಮೊಬೈಲ್ ಎಂಬ ಮಾಯಾಂಗನೆ ಇದ್ದಿದ್ದರೆ ಫೋಟೋ ತೆಗೆದುಕೊಳ್ಳಬಹುದಿತ್ತಾದರೂ ನಾನು ಮಾತ್ರ ನನ್ನ ಕಣ್ಣಗೊಂಬೆಯಲ್ಲಿ ಅಂದದ ಕರಿಹಲಗೆಯ ಮೇಲಿನ ಬಿಳಿದಾದ ಅಕ್ಷರಗಳ ಮಾಲೆಯ ಸ್ಕ್ರೀನ್ ಶಾಟ್ ಅನ್ನು ಸೆರೆ ಹಿಡಿದಿರುವೆ ಎಂದರೆ ತಪ್ಪೇನಿಲ್ಲ..!! ಅವರನ್ನೇ ಆದರ್ಶವಾಗಿಟ್ಟುಕೊಂಡು ಅಧ್ಯಾಪನದ ವೃತ್ತಿ ಜೀವನಕ್ಕೆ ಕಾಲಿಟ್ಟವಳು ನಾನು.. ಅಂತೆಯೇ 20೦7 ರಲ್ಲಿ ಪ್ರೌಢಶಾಲಾ ಗಣಿತ ಶಿಕ್ಷಕಿಯಾಗಿ ಸೇವೆ ಆರಂಭ ಮಾಡಿದ ನಂತರ ನನ್ನ ಗುರುಗಳನ್ನು ಹುಡುಕದ ಸೋಶಿಯಲ್ ಮೀಡಿಯಾಗಳಿಲ್ಲ ..ಸ್ವತಹ ನಾನು ಗುರು ಸ್ಥಾನದಲ್ಲಿದ್ದರೂ ನನ್ನ ಗುರುಗಳಿಗೆ ಒಂದು ಸಂದೇಶವನ್ನು ರವಾನಿಸಲೂ ಭಯವಾಗಿ ನಾನು ಸುಮ್ಮನಾಗುತ್ತಿದ್ದೆ. ಆದರೆ ಒಂದಲ್ಲ ಒಂದು ದಿನ ಅವರನ್ನು ಭೇಟಿಯಾಗಿ ಧನ್ಯವಾದಗಳನ್ನು ಸಲ್ಲಿಸಬೇಕೆಂಬ ಉತ್ಕಟ ಇಚ್ಛೆ ಇತ್ತು ಹೆಬ್ಬಯಕೆ ಇತ್ತು …!!

 

ಕರ್ನಾಟಕ ವಿಧಾನಸಭಾ ಚುನಾವಣೆ 2023 ಮೇ 10ನೇ ತಾರೀಕಿಗೆ ನಡೆಯಲಿದ್ದ ಕಾರಣ ಚುನಾವಣಾ ಕಾರ್ಯದಲ್ಲಿ ನಾನು ಪಾಲ್ಗೊಳ್ಳಬೇಕಾಗಿದ್ದರಿಂದ 9ನೇ ತಾರೀಖಿನಂದು ಬೆಳಗ್ಗೆ 9:00ಗೆ ಬಂಟ್ವಾಳದ ಇನ್ಫ್ಯಾಂಟ್ ಜೀಸಸ್ ಮೋಡಂಕಾಪು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿ ನನ್ನ ಕೊಠಡಿ ಒಳಗೆ ಬಂದಾಗ ಪಕ್ಕದಲ್ಲಿ ಒಂದು ಸುಸ್ಪಷ್ಟ ಧ್ವನಿ ಕೇಳಿಸಿತು .ಎರಡು ವರ್ಷಗಳ ಕಾಲ ಸ್ಪಷ್ಟ ಇಂಗ್ಲಿಷ್ ನಲ್ಲಿ ರಸ್ತವತ್ತಾಗಿ ರಸಾಯನ ಶಾಸ್ತ್ರ ಬೋಧಿಸಿದ ಅದೇ ಧ್ವನಿ ಅದೇ ರಿ ಧಮಿಕ್ ವಾಯ್ಸ್.. ಅದೇ ಮ್ಯಾಜಿಕಲ್ ವಾಯ್ಸ್.. ಬರೋಬ್ಬರಿ 22 ವರ್ಷಗಳ ಬಳಿಕ ದೇವರೆ ಒದಗಿಸಿದಂತ ಸೌಭಾಗ್ಯ ..ಯಾರನ್ನು ಇಷ್ಟು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತಿದ್ದೆನೋ ಅದೇ ನನ್ನ ಗುರುಗಳು  ಇಂದು ನನ್ನ ಕಣ್ಣೆದುರಲ್ಲಿ..ಶ್ರೀ ಜಯಾನಂದ ಸುವರ್ಣ ಸರ್ .ಭಯವೋ.. ಖುಷಿಯೋ ..ಅನಿರ್ವಚನೀಯ ಆನಂದದ ಅನುಭವ!! ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ ಬಹಳಷ್ಟು ಮಾತಾಡಿದೆ. ಅವರ ಸರಿ ಸಮಕ್ಕೆ ನಿಂತು ಫೋಟೋ ಕ್ಲಿಕ್ಕಿಸುವಾಗ ಭಯವಾಗುತ್ತಿತ್ತು.  ಆದರೆ ಎಷ್ಟೋ ವರ್ಷಗಳ ಆಸೆ ಈಡೇರಿತ್ತು .

ನಾನಿಂದು ಗುರು ಸ್ಥಾನದಲ್ಲಿ ನಿಂತು ಪ್ರತಿ ನನ್ನ ತರಗತಿಯಲ್ಲಿ ಚಾಕ್ ಪೀಸ್ ಕೈಗೆತ್ತಿಕೊಂಡಾಗ ನೆಚ್ಚಿನ  ಗುರುಗಳನ್ನು ನೆನೆಸಿಕೊಂಡು ಕರಿ ಹಲಗೆಯಲ್ಲಿ ಬರೆಯಲು ಶುರು ಮಾಡುತ್ತೇನೆ. ನಾನು ಬರೆಯುವ ಅಕ್ಷರಗಳು ಒಂದಷ್ಟು ಮಕ್ಕಳಿಗೆ ಪ್ರೇರಣೆಯಾಗಲಿ ಎಂಬುದು ನನ್ನ ಆಶಯ .ಮತ್ತೊಮ್ಮೆ ನನಗೆ ವಿದ್ಯಾರ್ಥಿನಿಯಾಗಿ ನನ್ನ  ನೆಚ್ಚಿನ ಗುರುಗಳ ತರಗತಿಯಲ್ಲಿ ಕುಳಿತುಕೊಳ್ಳುವ ಹೆಬ್ಬಯಕೆಯ ಜೊತೆಗೆ… ಪ್ರತಿ ವಿದಾಯ ಮತ್ತೊಂದು ಭೇಟಿಗೆ ನಾಂದಿಯಾಗಲಿ ಎನ್ನುವ ಸದಾಶಯದೊಂದಿಗೆ……….‌.‌…

ಶ್ರೀಮತಿ ಜ್ಯೋತಿ ಬೈಲೂರು

ಸಹಶಿಕ್ಷಕರು, ಸ.ಪ್ರೌ.ಶಾಲೆ ಕೊಯಿಲ

ಬಂಟ್ವಾಳ ತಾಲೂಕು,ದ.ಕ. 574211

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…

11 hours ago

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…

11 hours ago

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…

12 hours ago

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…

1 day ago

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…

1 day ago

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…

1 day ago