ಜನ ಮನದ ನಾಡಿ ಮಿಡಿತ

Advertisement

ಹನಗೋಡು ಹೋಬಳಿಯಲ್ಲಿ ಸರಣಿ ಕಳ್ಳತನ..!

ಹುಣಸೂರು: ರಾತ್ರಿ ಸಮಯದಲ್ಲಿ ಮೊಬೈಲ್ ಅಂಗಡಿ ಮತ್ತು ಬಾಳೆಮಂಡಿ ಅಂಗಡಿಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಹನಗೋಡು ಹೋಬಳಿಯಲ್ಲಿ ನಡೆದಿದೆ. ಕಳ್ಳರು ಬೀಗ ಮುರಿದು ಮಾಲಿಕ ಮಹೇಶ್ ರವರ ಮೊಬೈಲ್ ಅಂಗಡಿಯಲ್ಲಿ ಸುಮಾರು 60000/- ನಗದು ಮತ್ತು ಪಕ್ಕದ ಬಾಳೆಮಂಡಿ ಅಂಗಡಿಲ್ಲಿ 4000/- ನಗದನ್ನು ದೋಚಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಮುರಿದ ಬೀಗವನ್ನು ಅನುಮಾನ ಬಾರದಿರಲ್ಲಿ ಎಂದು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.


ಹನಗೋಡು ಹೋಬಳಿಯ ವೀರತಯ್ಯನಕೊಪ್ಪಲು ಗ್ರಾಮದ ನಿವಾಸಿ ಮಹೇಶ್ ರವರು ಹನಗೋಡು ಗ್ರಾಮದ ಶಂಕರಪ್ಪ ರವರ ಮಳಿಗೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಎಂದಿನಂತೆ ಸಾಯಿಂಕಾಲ ಸುಮಾರು 60000 ಹಣವನ್ನು ಕ್ಯಾಸ್ ಬಾಕ್ಸ್ ನಲ್ಲಿ ಇರಿಸಿ ಬೀಗ ಹಾಕಿ ಹೋಗಿದ್ದರಂತೆ. ಬೆಳಗ್ಗೆ ಬಂದು ನೋಡಿದಾಗ ಅಂಗಡಿಯ ಬೀಗ ತೆರೆದಿರುವುದು ಕಂಡು ಗಾಬರಿಗೊಂಡ ಮಾಲಿಕ ಮಹೇಶ್ ತಕ್ಷಣ ಒಳಗೆ ಹೋಗಿ ನೋಡಿದಾಗ ಹಣ ದೋಚಿರುವುದು ಖಚಿತವಾಗಿದೆ. ಪಕ್ಕದ ಬಾಳೆ ಮಂಡಿ ಮಾಲಿಕರಾದ ರಾಘುವೇಂದ್ರ ರವರು ತಮ್ಮ ಅಂಗಡಿಯಲ್ಲೂ ಇಟ್ಟಿದ್ದ 4000/- ನಗದನ್ನು ಕಳ್ಳರು ದೋಚಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಹನಗೋಡು ಹೋಬಳಿಯು ಸುಮಾರು ಗ್ರಾಮಗಳಿಂದ ಕೂಡಿದ್ದು ಹಲವಾರು ಜನ ವ್ಯಾಪಾರ, ವ್ಯವಹಾರ ಮಾಡುವುದರಿಂದ ಪೊಲೀಸ್ ವ್ಯವಸ್ತೆ ಸುವ್ಯವಸ್ಥಿತವಾಗಿರಬೇಕು ಹಾಗೂ ಈ ಹಿಂದೆ ಇದ್ದ ಹೆಡ್ ಕಾನ್ಸಟೇಬಲ್ ನಾಗರಾಜು ರವರ ಕಾಲಾವಧಿಯಲ್ಲಿ ಹನಗೋಡು ಹೋಬಳಿಯಲ್ಲಿ ಎಲ ರೀತಿಯಲ್ಲೂ ಸ್ವಲ್ಪ ಭದ್ರತೆಯಿಂದ ಇತ್ತು, ಈಗ ಪೊಲೀಸ್ ಚೌಕಿ ಇದ್ದರೂ ಅದರಲ್ಲಿ ಪೊಲೀಸ್ ಇರುತ್ತಿಲ್ಲ ಬೀಗ ಹಾಕಿ ಅವರ ಪಾಡಿಗೆ ಹೋಗುತ್ತಿರುತ್ತಾರೆ ಹಾಗಾಗಿ ಮುಂದಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಗ್ರಾಮಸ್ಥರು ಮತ್ತು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪೊಲೀಸ್ ಅಧಿಕಾರಿಗಳು ಸ್ಥಳ ಮಹಜರು ಮಾಡಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!